ವಿಜಯಸಾಕ್ಷಿ ಸುದ್ದಿ, ರೋಣ : ಹಾವೇರಿ-ಗದಗ ಲೋಕಸಭಾ ಚುನಾವಣೆಯ ಪ್ರಯುಕ್ತ ರೋಣ ತಾಲೂಕಿನ ವಕೀಲರ ಸಂಘಕ್ಕೆ ಭೇಟಿ ನೀಡಿದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮತ ಯಾಚಿಸಿದರು.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಮೇಲೆ ವಿಶ್ವಾಸವಿಟ್ಟು ಮತ ಹಾಕಿದವರಿಗೆ ಋಣಿಯಾಗಿರುತ್ತೇವೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತೇವೆ ಎಂದರಲ್ಲದೆ, ಸರ್ವರಿಗೂ ಸಮಾನ ನ್ಯಾಯ ದೊರೆಯಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ರೋಣ ಶಾಸಕ ಜಿ.ಎಸ್. ಪಾಟೀಲ, ವಕೀಲರ ಸಂಘದ ಅಧ್ಯಕ್ಷ ವಿ.ಎಸ್. ಬಂಗಾರಿ, ವಿ.ಆರ್. ಗುಡಿಸಾಗರ, ಎ.ಎಸ್. ಅರಹುಣಸಿ, ಸಿ.ಕೆ.ವೈ. ಅವಧೂತ, ಎಚ್.ಎಫ್. ಕಾಡದೇವರಮಠ, ಎಂ.ಎಚ್. ಮುಲ್ಲಾ, ವೈ.ಡಿ. ನದಾಫ, ಆರ್.ಎಂ. ರಾಯಭಾಗಿ, ಶ್ರೀಧರ್ ನಾಯಕ, ಅನಿಲ್ ತೆಗ್ಗಿನಕೇರಿ, ಜಿ.ಎಂ. ಹಬ್ಬಳ್ಳಿಮಠ, ಶ್ರೇರ್ ಕುಮಾರ್ ಚಿತ್ರಗಾರ ಹಾಗೂ ಸಂಘದ ಸದಸ್ಯರು ಇದ್ದರು.