ಬಿಜೆಪಿ ನಾಯಕರ ಮೇಲೆ ಯಾವುದೇ ಕೇಸ್‌ʼಗಳಿಲ್ವಾ?: ಕೆ.ಜೆ.ಜಾರ್ಜ್‌ ಪ್ರಶ್ನೆ

0
Spread the love

ಬಳ್ಳಾರಿ: ಬಿಜೆಪಿಯವರು ಯಾಕೆ ಸಿಬಿಐಗೆ ಕೊಡಿ ಅಂತಾ ಹೇಳುತ್ತಿದ್ದಾರೆ ? ಇಲ್ಲಿ ನಮ್ಮ ಅಧಿಕಾರಿಗಳು ದಕ್ಷರಿಲ್ವಾ? ಸಿಬಿಐ ಕೇಂದ್ರದ್ದು, ಅದಕ್ಕೆ ಸಿಬಿಐಗೆ ಕೊಡಿ ಅಂತಾ ಹೇಳ್ತಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಬಳ್ಳಾರಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಹಗರಣ ಸಿಬಿಐಗೆ ಕೊಡುವಂತೆ ಬಿಜೆಪಿ ನಾಯಕರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರು ಯಾಕೆ ಸಿಬಿಐಗೆ ಕೊಡಿ ಅಂತಾ ಹೇಳುತ್ತಿದ್ದಾರೆ ? ಇಲ್ಲಿ ನಮ್ಮ ಅಧಿಕಾರಿಗಳು ದಕ್ಷರಿಲ್ವಾ? ಸಿಬಿಐ ಕೇಂದ್ರದ್ದು, ಅದಕ್ಕೆ ಸಿಬಿಐಗೆ ಕೊಡಿ ಅಂತಾ ಹೇಳ್ತಿದ್ದಾರೆ. ಬಿಜೆಪಿ ನಾಯಕರ ಮೇಲೆ ಯಾವುದೇ ಕೇಸ್‌ಗಳಿಲ್ವಾ? ಎಂದು ಪ್ರಶ್ನೆ ಮಾಡಿದರು.

Advertisement

ಇನ್ನೂ ಎಸ್ಐಟಿ ತನಿಖೆಗೆ ನಾಗೇಂದ್ರ ಸಹಕಾರ ಮಾಡ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಾಜ್೯ ನಾಗೇಂದ್ರ ಅವರು ಸಹಕಾರ ಮಾಡ್ತಿಲ್ಲ ಅಂತಾ ಎಸ್ಐಟಿಯವರು ಹೇಳಿದ್ದಾರಾ? ಎಸ್ಐಟಿಯವರು ಆ ರೀತಿ ಹೇಳಿಲ್ಲ. ನಾನು ಗೃಹ ಸಚಿವನಾಗಿದ್ದವನು ಅಧಿಕಾರಿಗಳು ಏನು ಕೆಲಸ ಮಾಡುತ್ತಾರೆ ಎನ್ನುವುದು ಗೊತ್ತಿದೆ. ಈಗ ಎಸ್ಐಟಿ ತನಿಖೆ ಮಾಡ್ತಿದೆ. ಸರ್ಕಾರ ಇದ್ರಲ್ಲಿ ಯಾವುದೇ ಹಸ್ತಕ್ಷೇಪ ಮಾಡ್ತಿಲ್ಲ. ಈ ಪ್ರಕರಣದಿಂದ ಸರ್ಕಾರಕ್ಕೆ ಯಾವುದೇ ಮುಜುಗರವೂ ಇಲ್ಲ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here