ದಾವಣಗೆರೆ:- ನಿರಂತರ ಮಳೆಯಿಂದ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರಗೆರೆಯ ಪೊಲೀಸ್ ಹೊರ ಠಾಣೆ ಸೋರುತ್ತಿದ್ದು, ಸಿಬ್ಬಂದಿಗಳು ಕೆಲಸ ಮಾಡಲಾಗದೆ ಹೈರಾಣಾಗಿದ್ದಾರೆ.
Advertisement
ಠಾಣೆ ಸೋರುತ್ತಿರುವುದರಿಂದ ಠಾಣೆಯಲ್ಲಿರುವ ಸಿಬ್ಬಂದಿಗಳಿಗೆ ತೊಂದರೆ ಆಗಿದ್ದು, ದಾಖಲೆಗಳು ನಾಶವಾಗುವ ಆತಂಕ ಎದುರಾಗಿದೆ. ಸಂಪೂರ್ಣ ಶಿಥಿಲಗೊಂಡಿರುವ ಪೊಲೀಸ್ ಠಾಣೆಯಲ್ಲೇ ಕೆಲಸ ಮಾಡುವ ಪರಿಸ್ಥಿತಿ ಪೊಲೀಸ್ ಸಿಬ್ಬಂದಿಗೆ ಬಂದೊದಗಿದೆ. ಅಲ್ಲದೇ ಯಾವಾಗ ಮೇಲ್ಚಾವಣಿ ಕಳಚಿ ಬೀಳುತ್ತದೆಯೋ ಎನ್ನುವ ಅಂತಂಕ ಇಲ್ಲಿನ ಪೊಲೀಸರಿಗಿದೆ.
ಈ ಹಿನ್ನೆಲೆ ಯಾವುದೇ ಅನಾಹುತ ಸಂಭವಿಸೋ ಮುನ್ನ ಪೊಲೀಸ್ ಠಾಣೆ ದುರಸ್ತಿ ಮಾಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಅವಘಡ ಸಂಭವಿಸಿದರೆ ಯಾರು ಹೊಣೆ. ಹೀಗಾಗಿ ಕೂಡಲೇ ಸುಸಜ್ಜಿತ ಕಟ್ಟಡಕ್ಕೆ ತಾವರಗೆರೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.