ಹಾವೇರಿ: ಬಸ್ ಚಾಲಕ ವೃದ್ದೆ ಜೀವ ಉಳಿಸಲು ತುಂಬಿದ ನದಿಗೆ ಹಾರಿದ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಮಜೀದ್ ಸಾಬ್ ಗುಬ್ಬಿ ಬಸ್ ಚಾಲಕನಾಗಿದ್ದು, ಮಾಸೂರಿನಿಂದ ಹೊನ್ನಾಳಿಗೆ ಹೊರಟಿದ್ದ ಬಸ್ ನ ನದಿಗೆ ಬಿದ್ದ ಅಪರಿಚಿತ ವೃದ್ದೆಯನ್ನು ಕಂಡು ಬಸ್ ನಿಲ್ಲಿಸಿ ಜೀವ ಉಳಿಸಲು ಮುಂದಾಗಿದ್ದಾರೆ.
Advertisement
ತುಂಬಿ ಹರಿಯುತ್ತಿರುವ ನದಿಯಿಂದ ವೃದ್ದೆಯನ್ನು ರಕ್ಷಿಸಿದ್ದಾರೆ. ಆದ್ರೆ ಜೀವದ ಹಂಗು ತೊರೆದು ವೃದ್ದೆ ಕಾಪಾಡಲು ಮುಂದಾದ ಚಾಲಕನ ಪ್ರಯತ್ನ ವಿಫಲವಾಗಿದ್ದು, ಉಸಿರಾಟದ ತೊಂದರೆಯಿಂದ ವೃದ್ದೆ ಕೊನೆಯುಸಿರೆಳೆದಿದ್ದಾರೆ. ಇನ್ನೂ ಡ್ರೈವರ್ ಸಾಹಸಕ್ಕೆ ಸಾರ್ವಜನಿಕರು ಫಿದಾ ಆಗಿದ್ದಾರೆ.