ಒಂದು ಲಕ್ಷಕ್ಕೆ ಡಬಲ್, ತ್ರಿಬಲ್ ಹಣ ಕೊಡ್ತೇವೆ ಎಂದು ಜನರಿಗೆ ವಂಚನೆ: ಆರೋಪಿಗಳು ಅರೆಸ್ಟ್

0
Spread the love

ಬೆಂಗಳೂರು: ಜಾರಿ‌ನಿರ್ದೇಶನಾಲಯದ ಹೆಸರು ಬಳಸಿ ಕೋಟ್ಯಾಂತರ ಹಣ ವಂಚನೆ ಮಾಡಿರುವ ಸಂಬಂಧ ಮಹಿಳೆಯನ್ನು ಬಂಧಿಸಲಾಗಿದೆ. ಕಲ್ಪನ (47) ಬಂಧಿತ ಆರೋಪಿತೆ ಮಹಿಳೆಯಾಗಿದ್ದು, ಕಳೆದ ಎರಡು ವರ್ಷಗಳಿಂದ ಹತ್ತಾರು ಜನರಿಗೆ ವಂಚಿಸುತ್ತಾ ಬಂಧಿದ್ದಾಳೆ. ಮಹಿಳೆ ಸೇರಿದಂತೆ ಏಳು ಜನರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಬ್ಯಾಂಕ್​ ಮ್ಯಾನೇಜರ್​ ನಾಗೇಶ್ವರ ರಾವ್ ಹಾಗೂ ಸುಜರಿತ ಎಂಬುವರು ತಮ್ಮ ಸಂಬಂಧಿಕರಾದ ಮಾಲಾ ಮತ್ತು ರಮೇಶ್​ ಎಂಬುವರನ್ನು ಕೊರೊನಾ ಸಮಯದಲ್ಲಿ ಕಲ್ಪನಾಗೆ ಪರಿಚಯಿಸುತ್ತಾರೆ.

Advertisement

ನಂತರ ಕಲ್ಪನಾ ಕುಡುಮುಡಿ ಎಂಬಲಿ 100 ಕೋಟಿ ಆಸ್ತಿ ಇದೆ, ಕೋರ್ಟಿನಲ್ಲಿ ಕೇಸ್ ನಮ್ಮ ಪರವಾಗಿ ಆಗಿದೆ. ದಾಖಲೆಗಳನ್ನು ತೆಗೆದುಕೊಳ್ಳಲು ನನಗೆ ಹಣದ ಅವಶ್ಯಕತೆ ಇದೆ. ಹೀಗಾಗಿ ತುರ್ತಾಗಿ 15 ಲಕ್ಷ ಬೇಕು ಶೇಕಡ 3ರಷ್ಟು ಬಡ್ಡಿ ಸೇರಿಸಿ 15 ದಿನಗಳ ಒಳಗಡೆ ಹಣ ವಾಪಸ್ ಕೊಡುತ್ತೇನೆಂದು ಮಾಲಾ ಮತ್ತು ರಮೇಶ್​ಗೆ ಹೇಳಿದ್ದಾಳೆ.

ಮಾಲಾ ಮತ್ತು ರಮೇಶ್ ಸಂಬಂಧಿಯಾದ ನಾಗೇಶ್ವರ ರಾವ್ ಹಾಗೂ ಸುಜರಿತ, ಹಾಗೂ ಡ್ರೈವರ್ ಮಂಜುರವರ ಸಮಕ್ಷಮ ಹಣ ಪಡೆದುಕೊಂಡಿದ್ದಾಳೆ. ನಂತರ ಮಾಲಾ ಮತ್ತು ರಮೇಶ್ 15 ದಿನಗಳ ನಂತರ ಕಲ್ಪನಾಗೆ ಹಣ ಕೇಳಿದ್ದಾರೆ. ಆಗ ಕಲ್ಪನಾ ನಾವು ಕಪ್ಪು ಹಣವನ್ನು ಕಾನೂನು ಬದ್ಧ ಹಣವನ್ನಾಗಿ ಪರಿವರ್ತಿಸಲು ನೂರು ಕೋಟಿ ರೂಗಳಿಗೆ ಶೇ 30ರಂತೆ 30 ಕೋಟಿ ರೂಗಳನ್ನು ಕಟ್ಟಬೇಕು, ನೀವು ನಮಗೆ ಕೊಟ್ಟಿರುವ ಹಣಕ್ಕೆ, ಅದರ ಹತ್ತು ಪಟ್ಟು ಹಣವನ್ನು ಹೆಚ್ಚುವರಿ ಕೊಡುತ್ತೇನೆ ಮತ್ತು 2 ಕೆಜಿ ಚಿನ್ನ ಮತ್ತು 20 ಕೆಜಿ ಬೆಳ್ಳಿ ವಿಗ್ರಹಗಳನ್ನು ನಿಮಗೆ ಕೊಡುತ್ತೇನೆ. ಆರ್​ಬಿಐ ಉನ್ನತ ಅಧಿಕಾರಿಗಳು ನಮ್ಮ ಜೊತೆ ಇರುತ್ತಾರೆ, ಅಲ್ಲದೆ ವರುಣ್ ಎಂಬುವವನು ಇಡಿ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆಂದು ನಂಬಿಸಿದ್ದಾಳೆ.

ಗೋಡೌನ್​ನಲ್ಲಿರುವ ಹಣದ ಕಂತೆಗಳಿಗೆ ಔಷದಿ ಹಾಕಬೇಕು ಇಲ್ಲದಿದ್ದರೆ ಹಣವು ಒಂದಕ್ಕೊಂದು ಅಂಟಿಕೊಂಡು ನಾಶವಾಗುತ್ತದೆ. ಹಣವನ್ನು ಈಗಲೇ ಕೊಟ್ಟರೆ 2-3 ದಿನಗಳಲ್ಲಿ ನಿಮಗೆ ಹತ್ತು ಪಟ್ಟು ಹೆಚ್ಚಿನ ಹಣ ಕೊಡುತ್ತೇವೆಂದು ಹೇಳಿ ಪರಿಪರಿಯಾಗಿ ನಂಬಿಸಿದ್ದಾಳೆ. ಇವಳ ಮಾತನ್ನು ನಂಬಿದ ಮಾಲಾ ಮತ್ತು ರಮೇಶ್ ಒಟ್ಟು 4 ಕೋಟಿ ರೂ. ಹಣವನ್ನು ವಿವಿಧ ದಿನಾಂಕಗಳಂದು ನಾಗೇಶ್ವರ ರಾವ್ ಹೆಂಡತಿ ಸುಜರಿತ, ಕಲ್ಪನಾ, ದಿಲೀಪ್, ತರುಣ, ಗೌತಮ್, ಚಾಲಕ ಮಂಜು ಅವರಿಗೆ ನೀಡಿದ್ದಾರೆ. ನಂತರ ಮಾಲಾ ಮತ್ತು ರಮೇಶ್ ಹಣವನ್ನು ವಾಪಸ್ ಕೇಳಿದಾಗ ನಾವು ಹಣವನ್ನು ಕೊಡುವುದಿಲ್ಲ. ನೀವು ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ಇನ್ನೂ ಘಟನೆ ಸಂಬಂಧ ಹೆಬ್ಬಾಳ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here