ಮಂಗಳೂರು: ಅಗತ್ಯ ಇಲ್ಲದವರಿಗೆ ಯೋಜನೆ ತಲುಪುತ್ತಿರುವುದು ಸರ್ಕಾರಕ್ಕೆ ಹೊರೆ. ಇದು ಯೋಜನೆಯ ಉದ್ದೇಶವೂ ಅಲ್ಲ. ಬಡವರಿಗೆ ಯೋಜನೆಯ ಪ್ರಯೋಜನವಾಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಯೋಜನೆಯಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸಲಾಗುವುದು. ಇದು ಹೊಸ ಯೋಜನೆ. ಹಾಗಾಗಿ, ಹೊಸ ಯೋಜನೆ ಅನುಷ್ಠಾನ ಮಾಡುವಾಗ ಅದರಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಮುಂದುವರಿಸುತ್ತೇವೆ ಎಂದರು.
ಅಗತ್ಯ ಇಲ್ಲದವರಿಗೆ ಯೋಜನೆ ತಲುಪುತ್ತಿರುವುದು ಸರ್ಕಾರಕ್ಕೆ ಹೊರೆ. ಇದು ಯೋಜನೆಯ ಉದ್ದೇಶವೂ ಅಲ್ಲ. ಬಡವರಿಗೆ ಯೋಜನೆಯ ಪ್ರಯೋಜನವಾಗಬೇಕು ಎಂದು ತಿಳಿಸಿದರು. ಬಿಪಿಎಲ್ ಕಾರ್ಡ್ ಅನ್ನು ಮಾನದಂಡವಾಗಿ ಉಪಯೋಗಿಸುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳು ಅನರ್ಹರಿಗೆ ಹೋಗುತ್ತಿದೆ. ಅದಕ್ಕೆ ಮಾನದಂಡಗಳ ಬಗ್ಗೆ ಮುಂದೆ ಚರ್ಚಿಸುತ್ತೇವೆ. ಶಕ್ತಿ ಯೋಜನೆಯಲ್ಲಿ ಯಾವುದೇ ಮಾನದಂಡವಿಲ್ಲ. ಗೃಹ ಲಕ್ಷ್ಮಿ ಯೋಜನೆ ಬಡ ಕುಟುಂಬಕ್ಕೆ ಹೋಗಬೇಕು. ಶ್ರೀಮಂತರಿಗೆ ಕೊಟ್ಟು ಪ್ರಯೋಜನವಿಲ್ಲ ಎಂದರು.