ಬೆಂಗಳೂರು:– ವರಮಹಾಲಕ್ಷ್ಮಿ ಮುಗಿಯುತ್ತಿದ್ದಂತೆ ನಗರದ ರಸ್ತೆಗಳಲ್ಲಿ ರಾಶಿ ರಾಶಿ ಕಸ ಕೊಳೆಯಲು ಆರಂಭಿಸಿದೆ. ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಕಲರ್ ಫುಲ್ ಹೂವುಗಳು ಹಾಗೂ ಹಣ್ಣು ತರಕಾರಿಗಳಿಂದ ಕಂಗೊಳಿಸುತ್ತಿತ್ತು. ಆದರೆ, ಹಬ್ಬ ಮುಗಿಯುವ ಸಮಯದಲ್ಲಿ ಮಾರುಕಟ್ಟೆ ತನ್ನ ಸಹಜ ಸ್ಥಿತಿಯನ್ನು ಕಳೆದುಕೊಂಡಿದೆ.ವರಮಹಾಲಕ್ಷ್ಮಿ ಹಬ್ಬ ಮುಗಿಯುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ಬೆಟ್ಟದಂತೆ ಕಸ ನಿರ್ಮಾಣವಾಗಿದೆ.
ವರ ಮಹಾಲಕ್ಷ್ಮಿ ಹಬ್ಬದಿಂದ ತ್ಯಾಜ್ಯ ಇತಿಹಾಸ ನಿರ್ಮಿಸಿದೆ. ಕೆ. ಆರ್ ಮಾರ್ಕೆಟ್ ನಲ್ಲಿ ಒಂದೇ ದಿನ ಟನ್ ಗಟ್ಟಲೇ ಕಸ ನಿರ್ಮಾಣವಾಗಿದೆ. ನಿನ್ನೆ ಒಂದೇ ದಿನ ನೂರು ಟನ್ ತ್ಯಾಜ್ಯ ನಿರ್ಮಾಣವಾಗಿದ್ದು, ತ್ಯಾಜ್ಯ ತೆರವಿಗೆ ಬಿಬಿಎಂಪಿ ಸಿಬ್ಬಂದಿ ಹೈರಾಣಾಗಿದ್ದಾರೆ. ಕೆ. ಆರ್ ಮಾರ್ಕೆಟ್ ನಲ್ಲಿ ಒಂದೇ ದಿನ 100 ಟನ್ ಕಸ ನಿರ್ಮಾಣ ಆಗಿದೆ. ಮಾರುಕಟ್ಟೆಗೆ ಬಂದ ತರಕಾರಿ, ಹೂ, ಹಣ್ಣು, ಸೇರಿ ಇತರೆ ವಸ್ತುಗಳಿಂದ ಟನ್ ಗಟ್ಟಲೇ ಕಸ ಉತ್ಪಾದನೆ ಮಾಡಲಾಗಿದೆ.
ಕೆ.ಆರ್ ಮಾರ್ಕೆಟ್ ನಲ್ಲಿ ಕಳೆದ ಆರುದಿನದಿಂದ 600 ಟನ್ ತ್ಯಾಜ್ಯ ತೆರವು ಮಾಡಲಾಗಿದೆ. ಕಳೆದ ಒಂದು ವಾರದಿಂದ ಕೆ.ಆರ್ ಮಾರ್ಕೆಟ್ ನಲ್ಲಿ ಲಕ್ಷಾಂತರ ಜನರಿಂದ ವ್ಯಾಪಾರ ಮಾಡಲಾಗಿದೆ. ಅಗತ್ಯವಸ್ತುಗಳ ಖರೀದಿಗೆ ಬೆಂಗಳೂರು ಮಂದಿ ಮುಗಿಬಿದ್ದಿದ್ದರು. ಇದರಿಂದಾಗಿ ಬೆಟ್ಟದಂತೆ ತ್ಯಾಜ್ಯ ನಿರ್ಮಾಣವಾಗಿದೆ.ಪೌರಕಾರ್ಮಿಕರು ಹಾಗೂ ಜೆಸಿಬಿಯಿಂದ ರಾಶಿ ರಾಶಿ ಕಸ ತೆರವು ಮಾಡಲಾಗುತ್ತಿದೆ. ಕಸ ತೆರವಿಗೆ ಬಿಬಿಎಂಪಿ ಪೌರ ಕಾರ್ಮಿಕರು ಹರಸಾಹಸ ಪಟ್ಟಿದ್ದಾರೆ.