ವಿಜಯಸಾಕ್ಷಿ ಸುದ್ದಿ, ಗದಗ : ಜೈ ಭೀಮ್ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಅಲ್ಪಸಂಖ್ಯಾತರ ಘಟಕದ ಸಮೀರ ಜಮಾದಾರರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಬರ್ಕತ್ಅಲಿ ಮುಲ್ಲಾ ಮಾತನಾಡಿ, ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಪ್ರಜಾಶಕ್ತಿ ಸಮಿತಿಯ ಜಿಲ್ಲಾಧ್ಯಕ್ಷ ಡಾ. ದಾದಾಪೀರ್ ಕಲೆಗಾರ, ಕರ್ನಾಟಕ ಮಾದಿಗ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ರಾಘವೇಂದ್ರ ಪಿ.ಪರಪೂರ ಮಾತನಾಡಿದರು.
Advertisement
ಈ ಸಂದರ್ಭದಲ್ಲಿ ಮರಿಯಪ್ಪ ಪರಾಪೂರ, ರಮೇಶ್ ಠಾಕೂರ್, ಮಂಜುನಾಥ ಎಫ್.ತೌಜಲ್, ಬಸವರಾಜ ಬದಾಮಿ, ರಾಷ್ಟ್ರೀನ್ ಜೋಸೆಪ್, ರಾಜೇಶ ವಿ.ಶೆಟ್ಟರ್, ಇಮಾಮಹುಸೇನ ಕುನ್ನಿಬಾವಿ, ಎಸ್.ಕೆ. ಕುನ್ನಿಬಾವಿ, ನಜೀರ ಕುನ್ನಿಬಾವಿ, ಶಿವಣ್ಣ ಕಡಿವಾಲ, ಪ್ರೇಮಕುಮಾರ ಹುಬ್ಬಳ್ಳಿ, ಶ್ರೀಕಾಂತ ಹಲವಾಗಲಿ, ಹೇಮಂತ ಹುಬ್ಬಳ್ಳಿ ಉಪಸ್ಥಿತರಿದ್ದರು.