ಕನ್ನಡ ಚಿತ್ರರಂಗದಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ಆರೋಪ: ನಟ ಚೇತನ್ ಹೇಳಿದ್ದೇನು..?

0
Spread the love

ಬೆಂಗಳೂರು: ಎಷ್ಟೋ ತಲೆಮಾರಿನಿಂದ ಮಹಿಳೆಯರು ಲೈಂಗಿಕ ಕಿರುಕುಳ ಎದುರಿಸುತ್ತಿದ್ದಾರೆ ಅದನ್ನು ಕಿತ್ತೆಸೆಯಬೇಕು ಎಂದು ನಟ ಚೇತನ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇಂದು 153 ಜನ ಕಲಾವಿದರು ಸಹಿ ಮಾಡಿರುವ ಪ್ರತಿಯನ್ನು ಸಿಎಂಗೆ ಸಲ್ಲಿಸಿದ್ದೇವೆ.

Advertisement

ಸದ್ಯದಲ್ಲೇ ಇದರ ಬಗ್ಗೆ ಚರ್ಚೆ ನಡೆಸಲು ಮತ್ತೊಂದು ಸಭೆ ಮಾಡೋಣ ಎಂದು ಅವರು ತಿಳಿಸಿದ್ದಾರೆ ಎಂದು ಚೇತನ್ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಎಷ್ಟೋ ತಲೆಮಾರಿನಿಂದ ಲೈಂಗಿಕ ಕಿರುಕುಳ ಇದೆ ಅಂತ ಕೂಗು ಕೇಳಿ ಬರುತ್ತಿದೆ. ಅದನ್ನ ಕಿತ್ತು ಎಸೆಯಬೇಕು ಅಂತ ಈ ಫೈರ್ ಸಂಸ್ಥೆ ಮುಂದಾಗಿದೆ ಎಂದಿದ್ದಾರೆ

ಕಾಸ್ಟಿಂಗ್ ಕೌಚ್ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೀವಿ. ಈ ಥರ ಸಮಸ್ಯೆ ಇದೆಯಾ ಅಂತ ಸಿಎಂ ಕೇಳಿದ್ದು ಅಸಮಾಧಾನ ಆಯಿತು. ಹೇಮಾ ವರದಿ ರಚನೆ ಆಗೋಕೆ ಸಾಕಷ್ಟು ಟೈಮ್ ತೆಗೆದುಕೊಳ್ತು. ಅಲ್ಲಿ ಆದಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ರಚನೆಯಾಗಬೇಕು. ಈ ಅನ್ಯಾಯದ ವಿರುದ್ದ ಸಾಕಷ್ಟು ಜನ ಕೈಜೋಡಿಸಿದ್ದಾರೆ. ಈ ಕೆಲಸಕ್ಕೆ ಸ್ಟಾರ್ ನಟ, ನಟಿಯರು ಬೆಂಬಲಿಸಿದ್ದಾರೆ. ಇನ್ನೂ ಹೋಮ ಹವನ ಮಾಡುವುದರಿಂದ ಒಳಿತಾಗುವುದಲ್ಲ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here