ವಿಜಯಸಾಕ್ಷಿ ಸುದ್ದಿ, ಗದಗ : ಸರ್ವ ಜನಾಂಗದೊಂದಿಗೆ ಸಣ್ಣ ಪುಟ್ಟ ಸಮಾಜಗಳು ಸಂಘಟಿತರಾದರೆ ಮಾತ್ರ ಒಂದು ದೇಶ ಸರ್ವಾಂಗೀಣವಾಗಿ ಸಂಘಟಿತವಾಗಲು ಸಾಧ್ಯ. ಚಿಕ್ಕ ಸಮಾಜವಾದರೂ ವಿಶ್ವಕರ್ಮ ಸಮಾಜ ಗದಗ ಜಿಲ್ಲೆಯಲ್ಲಿ ರಾಜಗೋಪಾಲ ಕಡ್ಲಿಕೊಪ್ಪ ಅವರ ನೇತೃತ್ವದಲ್ಲಿ ಮಾದರಿಯಾಗಿ ಸಂಘಟಿತವಾಗಿದೆ. ಬೇರೆ ಸಮಾಜಗಳಿಗೆ ಇವರು ಕೈಗೊಂಡ ಕಾರ್ಯ ಯೋಜನೆಗಳು ಅನುಕರಣೀಯವಾಗಿವೆ ಎಂದು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಅಡಳಿತಾಧಿಕಾರಿ ಪ್ರೊ. ಶಿವಾನಂದ ಪಟ್ಟಣಶೆಟ್ಟಿ ಹೇಳಿದರು.
ಅವರು ನಗರದ ವಿಜಯನಗರ ಬಡಾವಣೆಯಲ್ಲಿರುವ ವಿಶ್ವಕರ್ಮ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ನೌಕರರ ಪತ್ತಿನ ಸಹಕಾರಿ ಸಂಘ ಹಾಗೂ ವಿಶ್ವಕರ್ಮ ಮಹಿಳಾ ಪತ್ತಿನ ಸಹಕಾರಿ ಸಂಘಗಳ 6ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿದರು.
ಗಿಣೀಗೇರಾ ಶ್ರೀಮತ್ ಆನೆಗೊಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಅಭಿನವ ಶ್ರೀಕಂಠಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವನ ನೀಡಿದರು.
ವಿಶ್ವಕರ್ಮ ಮಹಿಳಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಿಂದಮ್ಮ ವಡ್ಡಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರಮುಖರಾದ ಎ.ಎನ್. ಬಡಿಗೇರ, ಗಂಗಾಧರ ಬಡಿಗೇರ, ಮುತ್ತಣ್ಣ ಆರ್.ಬಡಿಗೇರ, ದೇವೇಂದ್ರಪ್ಪ ಬಡಿಗೇರ, ವೀರಣ್ಣ ಹಲವಾಗಲಿ, ಶ್ರೀಧರ ಕೊಣ್ಣೂರ, ರವೀಂದ್ರ ಕಮ್ಮಾರ, ಎಸ್.ಎಂ. ಕದಡಿ, ಪುಷ್ಪಾ ವಿಶ್ವಜ್ಞ, ವಾಣಿಶ್ರೀ ಕಡ್ಲಿಕೊಪ್ಪ, ಲಕ್ಷ್ಮಿ ಆರ್.ಕಡ್ಲಿಕೊಪ್ಪ, ಪದ್ಮಾವತಿ ಎಚ್. ಬಡಿಗೇರ, ಅನ್ನಪೂರ್ಣ ಬಡಿಗೇರ, ಪ್ರೇಮಾ ಗ.ಬಡಿಗೇರ, ಶಶಿಕಲಾ ಪಂಚಾಳ, ಜಯಶ್ರೀ ಬಡಿಗೇರ, ಅರುಂಧತಿ ಜಿ.ಕೆ., ಸುವರ್ಣ ಬಡಿಗೇರ, ವಿಜಯಲಕ್ಷ್ಮಿ ಹಡಗಲಿ, ಪ್ರತಿಮಾ ಮಹಾಪುರುಷ, ಜ್ಯೊತಿ ಬಡಿಗೇರ, ಶಶಿಧರ ಕಿತ್ತಲಿ, ವಿದ್ಯಾ ಬಡಿಗೇರ, ನೇತ್ರಾವತಿ ಪತ್ತಾರ, ರಾಘವೇಂದ್ರ ಇಚ್ಚಂಗಿ, ಮೋಹನ ಸುತಾರ, ಶ್ರೀಕಾಂತ ದೊಡಮನಿ, ಡಾ. ಗಿರೀಶ ಬಡಿಗೇರ, ವಿನಾಯಕ ಬಡಿಗೇರ, ದೇವೇಂದ್ರöಪ್ಪ ಬಡಿಗೇರ, ಲಕ್ಷ್ಮಣ ಶಿರೂರ, ಚಿದಾನಂದ ಕಮ್ಮಾರ, ವಿಶ್ವನಾಥ ಸರಾಫ, ಆನಂದ ಕಮ್ಮಾರ, ಶಂಕ್ರಾಚಾರ್ಯ ಕಂಚಗಾರ, ಚಂದ್ರಶೇಖರ ಶಿಂಗಟಾಲೂರ, ಸುಮಂಗಲಾ ಪತ್ತಾರ, ಇಂದಿರಾ ಬಡಿಗೇರ, ವ್ಯವಸ್ಥಾಪಕ ಮಧುಸೂದನ ವಿಶ್ವಕರ್ಮ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸಾಹಿತ್ಯ ಪತ್ತಾರ ಪ್ರಾರ್ಥಿಸಿದರು. ಸುಮಂಗಲಾ ಪತ್ತಾರ ಸ್ವಾಗತಿಸದರು. ವಿಶ್ವನಾಥ ಕಮ್ಮಾರ ನಿರೂಪಿಸಿದರ. ಡಾ. ಗಿರೀಶ ಬಡಿಗೇರ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಜಗೋಪಾಲ ಡಿ.ಕಡ್ಲಿಕೊಪ್ಪ ಮಾತನಾಡಿ, ನೌಕರರ ಪತ್ತಿನ ಹಾಗೂ ಮಹಿಳಾ ಪತ್ತಿನ ಸಹಕಾರಿ ಸಂಘಗಳು ಸರ್ವ ಸದಸ್ಯರ ಸಹಕಾರದಿಂದ ಏರುಗತಿಯಲ್ಲಿ ಸಾಗಿವೆ. ಇನ್ನಷ್ಟು ಸಮಾಜ ಬಾಂಧವರು ಠೇವಣಿ ಹಾಗೂ ಸದಸ್ಯತ್ವ ಹೊಂದುವ ಮೂಲಕ ಸಂಘಟನೆಯಲ್ಲಿ ಭಾಗಿಗಳಾಗಬೇಕು ಎಂದರು.