ಬೆಂಗಳೂರು: ವಿಜಯೇಂದ್ರರನ್ನ ಯಾವುದೇ ಕಾರಣಕ್ಕೂ ಕೆಳಗೆ ಇಳಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳೀದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅನುಭವ, ಸಂಘಟನೆ, ಅವರ ಉಪ ಚುನಾವಣೆ ಗೆಲುವು ಎಲ್ಲಾ ನೋಡಿದ ಮೇಲೆ ಹೈಕಮಾಂಡ್ ರಾಜ್ಯಾಧ್ಯಕ್ಷರಾಗಿ ಮಾಡ್ತು. ಯಾಕೆ ಅವರ ವಿರುದ್ಧ ಮಾತಾಡ್ತೀರಾ.
Advertisement
ವಿಜಯೇಂದ್ರರನ್ನ ಯಾವುದೇ ಕಾರಣಕ್ಕೂ ಕೆಳಗೆ ಇಳಿಸಲು ಸಾಧ್ಯವಿಲ್ಲ. ವಿಜಯೇಂದ್ರ ರೆಡಿಮೇಡ್ ಫುಡ್ ಅಲ್ಲ. ರಾಜ್ಯದ ಅಧ್ಯಕ್ಷ ಆದ ಮೇಲೆ ಕಾಲಿಗೆ ಚಕ್ರಕಟ್ಟಿಕೊಂಡು ಪಕ್ಷ ಸಂಘಟನೆ ಮಾಡ್ತಿದ್ದೇವೆ. ಅವರು ಅಧ್ಯಕ್ಷ ಆದ ಮೇಲೆ ಪಕ್ಷಕ್ಕೆ ಬೂಸ್ಟ್ ಸಿಕ್ಕಿದೆ. ಇಷ್ಟು ದಿನ ಮಾತಾಡಬಾರದು ಅಂತ ಸುಮ್ಮನೆ ಇದ್ವಿ. ಇನ್ನು ಮುಂದೆ ಸುಮ್ಮನೆ ಇರೊಲ್ಲ ಅಂತ ರೆಬಲ್ ಟೀಂಗೆ ಎಚ್ಚರಿಕೆ ಕೊಟ್ರು.