HomeGadag Newsಶ್ರೀ ದ್ಯಾಮಮ್ಮ ದೇವಸ್ಥಾನದಲ್ಲಿ ಚಂಡಿಕಾ ಹೋಮ

ಶ್ರೀ ದ್ಯಾಮಮ್ಮ ದೇವಸ್ಥಾನದಲ್ಲಿ ಚಂಡಿಕಾ ಹೋಮ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಸಮಿಪದ ತಿಮ್ಮಾಪೂರ ಗ್ರಾಮದಲ್ಲಿ ನವರಾತ್ರಿಯ ಅಂಗವಾಗಿ ದ್ಯಾಮಮ್ಮ ದೇವಿಗೆ ವಿಶೇಷ ಪೂಜೆ ಹಾಗೂ ಹೋಮ-ಹವನ ಕಾರ್ಯಕ್ರಮಗಳು ನಡೆದವು.

ಹುಬ್ಬಳ್ಳಿಯ ಪಂಡಿತ ಗಂಗಾಧರ ಭಟಶಾಸ್ತ್ರೀ ಹಾಗೂ ಸಂಗಡಿಗರು ಸೇರಿ ಶ್ರೀ ದ್ಯಾಮಮ್ಮ ದೇವಿಯ ಗುಡಿಯ ಆವರಣದಲ್ಲಿ ಚಂಡಿಕಾ ಹೋಮವನ್ನು ಸಲ್ಲಿಸಿ, ಗ್ರಾಮಕ್ಕೆ ಸಕಲ ಭಾಗ್ಯಗಳು ದೊರೆಯಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದರು.

ಪೂಜಾ ಕಾರ್ಯಕ್ರಮಗಳ ನಂತರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಗ್ರಾಮದ ಹಿರಿಯರಾದ ರಾಮನಗೌಡ ದೇಸಾಯಿ, ಸಂಗಪ್ಪ ಮಳ್ಳಿ, ಯಲ್ಲಪ್ಪ ಎಚ್.ಬಾಬರಿ, ಶರಣಪ್ಪ ಜೋಗಿನ, ರಮೇಶ ಜೋಗಿನ, ಅಡಿವೆಪ್ಪ ಜೋಗಿನ, ಕರಿಯಪ್ಪ ಬಾಬರಿ ರಾಮಣ್ಣ ಗಾಣದ, ಶ್ರೀಕಾಂತ ಪೂಜಾರ, ಬಸಪ್ಪ ಸತ್ಯಪ್ಪನವರ, ಚಿನ್ನಪ್ಪ ಬಿಸನಳ್ಳಿ, ಶೇಖಪ್ಪ ಪೂಜಾರ, ರಮೇಶ ಜೋಗಿನ, ಹುಚ್ಚೀರಪ್ಪ ಬಾಬರಿ, ಅಚ್ಚಕಾರದ ಬಸಪ್ಪ ಬಡಿಗೇರ, ಮಂಜು ಬಡಿಗೇರ ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img