ತುಮಕೂರು: ಬಂಡೆ ಛಿದ್ರಗೊಳಿಸುವ ಸ್ಫೋಟಕ ಸಿಡಿದು ಬಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಇಡಗೂರಿನಲ್ಲಿ ನಡೆದಿದೆ. ಮೋನಿಷ್ ಗಾಯಗೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದು, ಶಾಲೆಯ ಬಂಡೆ ಬಳಿಯಿದ್ದ ಸ್ಪೋಟಕವನ್ನು ಆಟದ ವಸ್ತು ಇರಬಹುದು ಎಂದು ಬಾಲಕ ಮುಟ್ಟಿದ್ದಾನೆ.
Advertisement
ಈ ವೇಳೆ ಸ್ಫೋಟಕ ಸಿಡಿದು ಬಾಲಕನ ಮೂರು ಬೆರಳು ಛಿದ್ರವಾಗಿದೆ. ಇನ್ನೂ ಗಾಯಗೊಂಡ ಬಾಲಕನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸಿಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.