ಗದಗ ನಗರದ ಸಿದ್ಧಲಿಂಗ ನಗರದ ಶ್ರೀ ಬನ್ನಿಮಹಾಂಕಾಳಿ ಸೇವಾ ಟ್ರಸ್ಟ್ ಕಮಿಟಿ ಹಾಗೂ ಯುವ ಬಳಗದ ವತಿಯಿಂದ ಆಯೋಜಿಸಲಾದ ದಸರಾ ಉತ್ಸವ-2024ರ ನಿಮಿತ್ತ ಗುರುವಾರ ದುರ್ಗಾಷ್ಟಮಿ ಪೂಜೆ ಹಾಗೂ ಪುಟ್ಟ ಮಕ್ಕಳನ್ನು ನವ ದುರ್ಗೆಯರನ್ನಾಗಿ ಶೃಂಗರಿಸಿ ಅಂಬಾಭವಾನಿ ದೇವಸ್ಥಾನಕ್ಕೆ ಉಡಿ ತುಂಬುವ ಮತ್ತು ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ನೆರೆದಿದ್ದರು.