ಮೈಸೂರು: ಸೈನಿಕ ಕುಲಕ್ಕೆ ಯೋಗೇಶ್ವರ್ ಅಪಮಾನ. ಅವನನ್ನ ಸೈನಿಕ ಅಂತ ಕರೆಯಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೈನಿಕ ಕುಲಕ್ಕೆ ಯೋಗೇಶ್ವರ್ ಅಪಮಾನ. ಅವನನ್ನ ಸೈನಿಕ ಅಂತ ಕರೆಯಬೇಡಿ. ಹುಣಸೂರು ಉಪ ಚುನಾವಣೆ ವೇಳೆ ಪಾರ್ಟಿ ಕೊಟ್ಟ ಹಣ ತೆಗೆದು ಕೊಂಡು ಓಡಿ ಹೋದ.
Advertisement
ಕಾಂಗ್ರೆಸ್ʼಗೆ ಒಬ್ಬ ಫ್ರಾಡ್ ಯೋಗೇಶ್ವರ್ ಅನಿವಾರ್ಯ ಆಗಿಬಿಟ್ನಾ? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಮುಡಾ ಹಾಗೂ ವಾಲ್ಮೀಕಿ ವಂಚನೆ ಪ್ರಕರಣದಲ್ಲಿ ಕಾಂಗ್ರೆಸ್ ಮುಳುಗಿದೆ. ಇದರ ಜೊತೆಗೆ ಯೋಗೇಶ್ವರ್ ಎಂಬ ಮತ್ತೊಬ್ಬ ಫ್ರಾಡ್ ಕಾಂಗ್ರೆಸ್ಗೆ ಜೊತೆಯಾಗಿದ್ದಾನೆ. ಕರ್ನಾಟಕ ಫ್ರಾಡ್ಗಳ ಸಂತೆಯಾಗಿದೆ, ಇದಕ್ಕೆ ಕಾರಣರು ಸಿಎಂ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದ್ದಾರೆ.