ವಕ್ಫ್ ಆಸ್ತಿ ವಿವಾದ ಇದು ಕಾಂಗ್ರೆಸ್ ನಡೆಸುತ್ತಿರುವ ಲ್ಯಾಂಡ್ ಟೆರರಿಸಂ: ಶೋಭಾ ಕರಂದ್ಲಾಜೆ

0
Spread the love

ವಿಜಯಪುರ: ವಕ್ಫ್ ಆಸ್ತಿ ವಿವಾದ ಇದು ಕಾಂಗ್ರೆಸ್ ನಡೆಸುತ್ತಿರುವ ಲ್ಯಾಂಡ್ ಟೆರರಿಸಂ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1974ರ ವಕ್ಫ್ ನೋಟಿಫಿಕೇಶನ್ ರದ್ದಾಗಬೇಕು. ಇದಕ್ಕಾಗಿ ಬಿಜೆಪಿ ಸುಮ್ಮನಿರಲ್ಲ, ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಎಲ್ಲಿ ನೋಡಿದರೂ ವಕ್ಫ್ ಆಸ್ತಿ ಎಂದೇ ಆಗಿ ಬಿಟ್ಟಿದೆ. ವಕ್ಫ್ ಆಸ್ತಿ ವಿವಾದ ಇದು ಕಾಂಗ್ರೆಸ್ ನಡೆಸುತ್ತಿರುವ ಲ್ಯಾಂಡ್ ಟೆರರಿಸಂ, ವಕ್ಫ್ ಬೋರ್ಡ್ ಲ್ಯಾಂಡ್ ಜಿಹಾದ್ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

Advertisement

ಇನ್ನೂ ಹಿಂದೂ ದೇವಾಲಯಗಳು, ಮಠಗಳು, ರೈತ ಜಮೀನು ಒಂದು ಉಳಿದಿಲ್ಲ. ಇದರ ವಿರುದ್ಧ ವಿಜಯಪುರದಿಂದಲೇ ನಾನು ವಕ್ಫ್ ಹೋರಾಟ ಪ್ರಾರಂಭಿಸುತ್ತಿದ್ದೇನೆ. ಇಂದು ರೈತರೊಂದಿಗೆ ಹೋರಾಟದಲ್ಲಿ ಭಾಗಿಯಾಗುತ್ತೇನೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಅವಧಿಯ ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here