ವಿಜಯೇಂದ್ರ‌ ‌ಇರೋ ವರೆಗೆ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಹೋಗಲ್ಲ: ರಮೇಶ್ ಜಾರಕಿಹೊಳಿ

0
Spread the love

ರಾಯಚೂರು: ವಿಜಯೇಂದ್ರ‌ ‌ಇರೋ ವರೆಗೆ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಹೋಗಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ವಿಜಯೇಂದ್ರ ಅಧ್ಯಕ್ಷ ಸ್ಥಾನದಲ್ಲಿ ಇರುವವರೆಗೂ ನಾನು ಪ್ರಚಾರಕ್ಕೆ ಹೋಗುವುದಿಲ್ಲ. ವಿಜಯೇಂದ್ರ‌ ‌ಇರೋ ವರೆಗೆ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಹೋಗಲ್ಲ ಎಂದು ಹೇಳಿದ್ದಾರೆ.

Advertisement

ಇನ್ನೂ ವಿಜಯೇಂದ್ರ ನೇತೃತ್ವ ಒಪ್ಪದಿದ್ರೂ ಪರವಾಗಿಲ್ಲ ರಾಜ್ಯದಲ್ಲಿ ಪಕ್ಷಕ್ಕೆ ಒಳ್ಳೆಯದಾಗಲಿ. ಮಹಾರಾಷ್ಟ್ರ ಚುನಾವಣೆಯಲ್ಲಿ ದೇವೇಂದ್ರ ಫಡ್ನವಿಸ್ ತ್ಯಾಗದಿಂದ ಪಕ್ಷ ಗಟ್ಟಿಯಾಗಿದೆ. ಶಿಂಧೆಯವರನ್ನು ಫಡ್ನವಿಸ್ ಸಿಎಂ ಮಾಡಿದ್ರು‌. ಬಿಜೆಪಿ ತನ್ನದೇ ಶಕ್ತಿಯ ಬಹುಮತ ಬರೋ ವಾತಾವರಣ ಸೃಷ್ಟಿಯಾಗಿದೆ ಎಂದರು.

ಕಾಂಗ್ರೆಸ್ ನಲ್ಲಿ ಐದು ಬಾರಿ ಶಾಸಕ ಆಗಿದ್ದೇನೆ. ಬಿಜೆಪಿಯಲ್ಲಿ ಎರಡು ಬಾರಿ ಆಗಿದ್ದೇನೆ. ಬಿಜೆಪಿಯಲ್ಲಿ ಬಂಗಾರದಂತಹ ಕಾರ್ಯಕರ್ತರು ಇದ್ದಾರೆ. ಯಾರು ಬಿ ಫಾರ್ಮ್ ತರ್ತಾರೋ ಗೊತ್ತಿರಲ್ಲ. ಈ ವರೆಗೆ 110 ದಾಟಿಲ್ಲ. ಮುಂದೆ 130-140 ಸೀಟು ತರಲು ಟೀಂ ಮಾಡಿದ್ದೇವೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here