HomeGadag Newsಡಿ.6ರಂದು ಬೆಳ್ಳಟ್ಟಿಯಲ್ಲಿ ಕರ್ಪೂರ ಕಾರ್ತಿಕೋತ್ಸವ

ಡಿ.6ರಂದು ಬೆಳ್ಳಟ್ಟಿಯಲ್ಲಿ ಕರ್ಪೂರ ಕಾರ್ತಿಕೋತ್ಸವ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿಯ ಶ್ರೀ ರಾಮಲಿಂಗೇಶ್ವರ ದಾಸೋಹ ಮಠದಲ್ಲಿ ಡಿ.6ರ ಬೆಳಿಗ್ಗೆ ಶ್ರೀ ರಾಮಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮಧ್ಯಾಹ್ನ 3 ಗಂಟೆಗೆ ಲಲಿತಾ ಸಹಸ್ರನಾಮ ಪಠಣ, ಸಂಜೆ 5 ಗಂಟೆಗೆ ಅನುಭವಗೋಷ್ಠಿ ನಡೆಯಲಿದೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಅಗಡಿ-ಗುತ್ತಲದ ಗುರುಸಿದ್ದ ಸ್ವಾಮೀಜಿ, ಗೌರವ ಸಾನ್ನಿಧ್ಯವನ್ನು ಕಲಬುರ್ಗಿ ಬ್ರಹ್ಮಪುರ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆಯನ್ನು ನರಗಡ್ಡಿಮಠದ ಶಾಂತಲಿAಗ ಸ್ವಾಮೀಜಿ, ಹಿರೇವಡ್ಡಟ್ಟಿಯ ಡಾ. ಸಿದ್ದಲಿಂಗ ದೇವರು ವಹಿಸಲಿದ್ದಾರೆ. ಅತಿಥಿಗಳಾಗಿ ವೀರೇಶ ಬ್ಯಾಹಟ್ಟಿ, ಎನ್.ಎಸ್. ಭಟ್, ಶಿವಮೂರ್ತೆಪ್ಪ ಶಿಂಪಗೇರ, ಗಣಪತಿ ಗಾಂವಕರ, ಪಂಚಯ್ಯ ಹಿರೇಮಠ, ಶಿವಚಲಕುಮಾರ ಸಾಲಿಮಠ, ಶ್ರೀನಿವಾಸರಡ್ಡಿ ಬಸವರಡ್ಡಿ ಆಗಮಿಸಲಿದ್ದಾರೆ.

ದಾಸೋಹಿ ಪ್ರಶಸ್ತಿ ಪುರಸ್ಕೃತರಾಗಿ ಹಾವೇರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ರೋಣ ಪಿಎಸ್‌ಐ ಪ್ರಕಾಶ ಬಣಕಾರ ಇವರುಗಳನ್ನು ಸನ್ಮಾನಿಸಲಾಗುವುದು. ನಂತರ ಕರ್ಪೂರ ಕಾರ್ತಿಕೋತ್ಸವ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ರಾಮಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪೀಠಾಧಿಪತಿ ಬಸವರಾಜ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img