ಕಿಚ್ಚನ ಮುಂದೆ ನಡೆಯಲಿಲ್ಲ ಶೋಭಾ ಡ್ರಾಮಾ: ಮನೆಯಿಂದ ಹೊರ ಹೋದ ಶೆಟ್ಟಿ

0
Spread the love

ಬಿಗ್ ಬಾಸ್ ಕನ್ನಡ ಸೀಸನ್​ 11 ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಮುಂದೆ ಶೋಭಾ ಶೆಟ್ಟಿ ಹೈಡ್ರಾಮಾವೇ ಕ್ರಿಯೇಟ್ ಮಾಡಿದ್ದರು. ಮನೆಮಂದಿಯ ಮುಖವಾಡ ಕಳಚುತ್ತೇನೆ ಎಂಟ್ರಿ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿಕೊಟ್ಟಿದ್ದ ಶೋಭಾ ಶೆಟ್ಟಿ ಬಂದ ಎರಡೇ ವಾರಕ್ಕೆ ಮನೆಯಿಂದ ಹೊರ ಹೋಗಿದ್ದಾಋಎ. ಕಿಚ್ಚನಿಗೆ ಕಿವಿ ಮಾತಿಗೂ ಬಗ್ಗದೆ ಮತ್ತೆ ನಾನು ಬಿಗ್ ಬಾಸ್ ಮನೆ ಬಿಟ್ಟು ಹೋಗ್ಬೇಕು ಎಂದು ಹಠ ಹಿಡಿದ್ರು. ಕಿಚ್ಚನ ಕೋಪ ಕೂಡ ನೆತ್ತಿಗೇರಿತ್ತು. ಸಿಟ್ಟಾದ ಸುದೀಪ್ಬಿಗ್ ಬಾಸ್ ಮನೆಗೆ ಬಾಗಿಲು ತೆರೆಸಿ ಹೊರಗೆ ಕಳುಹಿಸಿದ್ರು.

Advertisement

ಭಾನುವಾರದ ಎಪಿಸೋಡ್​ ಕೊನೆಯಲ್ಲಿ ನಟ ಸುದೀಪ್ ಫುಲ್ ಗರಂ ಆಗಿದ್ರು. ಅದೇ ಕೋಪದಲ್ಲೇ ಸುದೀಪ್ ಅವರು ಈ ಕೂಡಲೇ ನೀವು ಬಿಗ್ ಬಾಸ್​ ಮನೆಯಿಂದ ಹೊರಗೆ ಹೋಗಿ ಎಂದು ಶೋಭಾಗೆ ಹೇಳಿದ್ರು. ಬಾಗಿಲಿನಲ್ಲಿ ನಿಂತ ಶೋಭಾ ಶೆಟ್ಟಿ ಎಲಿಮಿನೇಟ್ ಆದ್ರೋ ಇಲ್ವಾ ಅನ್ನೋದು ಖಚಿತವಾಗಿರಲಿಲ್ಲ. ಸೋಮವಾರದ  ಸಂಚಿಕೆಯಲ್ಲಿ ಶೋಭಾ ಹೊರಗೆ ಹೋಗಿದ್ದನ್ನು ತೋರಿಸಿದ್ದಾರೆ.

ಶೋಭಾ ಅವರು ಮುಖ್ಯ ದ್ವಾರದ ಬಳಿ ಬಂತು ನಿಂತುಕೊಂಡು ‘ಈಗ ಹೋಗಬೇಕು ಅಂತ ಅನಿಸುತ್ತಿಲ್ಲ’ ಎಂದು ಮತ್ತೆ ಹೊಸ ಡ್ರಾಮಾ ಶುರು ಮಾಡಲು ಮುಂದಾದರೂ ಕೂಡ ಬಿಗ್ ಬಾಸ್​ ಮನಸ್ಸು ಕರಗಲಿಲ್ಲ. ಕಡೆಗೂ ಮುಖ್ಯದ್ವಾರ ಓಪನ್ ಆಯಿತು. ಶೋಭಾ ಹೊರಗೆ ಹೋಗಲೇಬೇಕಾಯಿತು.

ತೆಲುಗು ಬಿಗ್ ಬಾಸ್ ಶೋನಲ್ಲಿ ಶೋಭಾ ಶೆಟ್ಟಿ ಅವರು ಸಖತ್ ಸೌಂಡು ಮಾಡಿದ್ದರು. ತೆಲುಗು ಕಿರುತೆರೆಯಲ್ಲಿ ಅವರಿಗೆ ಸಿಕ್ಕಾಪಟ್ಟೆ ಹೆಸರು ಇದೆ. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಂತಾಯಿತು. ಸಿಕ್ಕ ಒಂದು ಒಳ್ಳೆಯ ಅವಕಾಶವನ್ನು ಹೀಗೆ ಅರ್ಧಕ್ಕೆ ಕೈ ಚೆಲ್ಲಿದ್ದಕ್ಕೆ ಸ್ವತಃ ಶೋಭಾ ಶೆಟ್ಟಿ ಜೊತೆಗೆ ಅವರ ಅಭಿಮಾನಿಗಳಿಗೂ ಬೇಸರವಾಗಿದೆ.

ಇನ್ನೊಂದು ಕಡೆ ಬಿಗ್‌ ಬಾಸ್‌ ಮನೆ ಈಗ ನ್ಯೂಸ್‌ ರೂಂ  ಆಗಿದೆ. ಸುದ್ದಿ ವಾಚಕರು ಐಶ್ವರ್ಯಾ ಆಗಿದ್ದಾರೆ. ಒಬ್ಬೊಬ್ಬೆ ವ್ಯಕ್ತಿತ್ವಗಳನ್ನೂ ಸಖತ್‌ ಆಗಿ ಮುಖ್ಯಾಂಶಗಳೊಂದಿಗೆ ವಿವರಿಸಿದ್ದಾರೆ ಐಶ್ವರ್ಯಾ. ಅದರಲ್ಲೂ ಚೈತ್ರಾ  ವ್ಯಕ್ತಿತ್ವವನ್ನು ವಿವರಿಸಿದ್ದಾರೆ. ಈ ಮಾತುಗಳನ್ನು ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ.


Spread the love

LEAVE A REPLY

Please enter your comment!
Please enter your name here