ಓಡದೇ ಇರುವ ಸಿನಿಮಾವೆಲ್ಲ ಚೆನ್ನಾಗಿಲ್ಲ ಎಂದು ನಾನು ಹೇಳಲ್ಲ: ನಟ ಉಪೇಂದ್ರ

0
Spread the love

ಮಂಗಳೂರು: ಓಡದೇ ಇರುವ ಸಿನಿಮಾವೆಲ್ಲ ಚೆನ್ನಾಗಿಲ್ಲ ಎಂದು ನಾನು ಹೇಳಲ್ಲ ಎಂದು ರಿಯಲ್​ ಸ್ಟಾರ್ ಉಪೇಂದ್ರ ಹೇಳಿದ್ದಾರೆ. ಕೊರಗಜ್ಜ ದೇವರ ದರ್ಶನ ಪಡೆದುಕೊಂಡು ಮಂಗಳೂರಿನಲ್ಲಿ ‘ಯುಐ’ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

Advertisement

ಕಂಟೆಂಟ್ ಇರುವ ಸಿನಿಮಾವನ್ನು ಪ್ರೇಕ್ಷಕರು ಎಂದು ಕೈಬಿಡೋದಿಲ್ಲ. ಹಾಗಂತ ಓಡದೇ ಇರುವ ಸಿನಿಮಾವೆಲ್ಲ ಚೆನ್ನಾಗಿಲ್ಲ ಎಂದು ಕೂಡ ನಾನು ಹೇಳಲ್ಲ. ಅದಕ್ಕೆ ಹಲವಾರು ಕಾರಣವಿದೆ. ಕೆಲವರಿಗೆ ಪಬ್ಲಿಸಿಟಿ ಮಾಡಲು ಆಗದೇ ಇರಬಹುದು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಹಲವಾರು ನಟ, ನಟಿಯರು ಕೊರಗಜ್ಜನ ಸನ್ನಿಧಿಗೆ ಬೇಟಿ ಕೊಡುತ್ತಲೇ ಇರುತ್ತಾರೆ. ಮಾಲಾಶ್ರೀ, ರಕ್ಷಿತಾ, ಶಿವಣ್ಣ, ರಚಿತಾ ರಾಮ್ ಸೇರಿದಂತೆ ಸ್ಯಾಂಡಲ್​ವುಡ್​ನ ಬಹಳಷ್ಟು ತಾರೆಗಳು ಕೊರಗಜ್ಜನ ಸನ್ನಿಧಿಗೆ ಭೇಟಿ ಕೊಟ್ಟಿದ್ದರು. ಈಗ ಉಪೇಂದ್ರ ಅವರೂ ಕರಾವಳಿ ಕ್ಷೇತ್ರ ಹಾಗೂ ಸನ್ನಿಧಾನಗಳಿಗೆ ಪ್ರಯಾಣಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here