ವಿಜಯಸಾಕ್ಷಿ ಸುದ್ದಿ, ರೋಣ: ಇಲ್ಲಿನ ಹೊಳೆ ಆಲೂರು ಬಾಪೂಜಿ ವಿದ್ಯಾನಿಕೇತನದಲ್ಲಿ ಹಳ್ಳಿ ಸೊಗಡು ಹಾಗೂ ಗ್ರಾಮೀಣ ಸಂತೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಶಿಕ್ಷಕಿ ಗುರುದೇವಿ ಮೊಕಾಶಿಮಠ್ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನ ಹಾಗೂ ವ್ಯಾವಹಾರಿಕ ಕುಶಲತೆಯನ್ನು ತಿಳಿಸುವುದು ತುಂಬಾ ಅವಶ್ಯ ಎಂದರು.
ಅನುಸೂಯ ವಿಶ್ವನಾಥ್ ಬಡಿಗೇರ್, ನೇತ್ರಾವತಿ ಪತ್ತಾರ್ ಮಾತನಾಡಿ, ಮಕ್ಕಳಿಗೆ ವ್ಯಾಪಾರದ ಬಗ್ಗೆ ಹಾಗೂ ವ್ಯವಹಾರದ ಕುಶಲತೆ ಬಗ್ಗೆ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಶಾಲೆಯ ಎಲ್ಲ ಮಕ್ಕಳು ಗ್ರಾಮೀಣ ಸೊಗಡಿನ ವೇಷ ಭೂಷಣಗಳನ್ನು ಧರಿಸಿ ತಾವೇ ಸ್ವತಃ ವ್ಯಾಪಾರವನ್ನು ಮಾಡುತ್ತಾ ತಾವೊಬ್ಬ ಕುಶಲ ವ್ಯಾಪಾರಿ ಎಂದು ತೋರಿಸಿಕೊಟ್ಟರು. ಮಂಡಳಿ ಅಧ್ಯಕ್ಷರಾದ ಪ್ರೊ. ಮಹಾಂತೇಶ್ ಬಾತಾಖಾನಿ, ಮುಖ್ಯೋಪಾಧ್ಯಾಯೆ ಅಪರ್ಣ ಗಂಗೂರ್ ಸಹ ಶಿಕ್ಷಕಿಯರಾದ ನಾಗರತ್ನ ಅರಳಿ, ರೇಖಾ ಪಾಟೀಲ್, ಉಮಾ ಉಪ್ಪಿನ್, ಕುಮಾರಿ ಸಂಗೀತ ಬಡಿಗೇರ್, ಸಿಬ್ಬಂದಿಗಳಾದ ದೀಪಾ ಪಾಟೀಲ್, ಶರಣು ಮೊಳ ಮತ್ತು ಮಕ್ಕಳು ಭಾಗವಹಿಸಿದ್ದರು.