ಕೇಂದ್ರದ ಕೈಗೊಂಬೆ ಆಗಿರುವ “ಇಡಿ” ಸೀಳು ನಾಯಿ ಇದ್ದಂತೆ: ಸಚಿವ ಕೃಷ್ಣ ಬೈರೇಗೌಡ ಕಿಡಿ!

0
Spread the love

ಗದಗ:- ಜಾರಿ ನಿರ್ದೇಶನಾಲಯ ಒಂದು ಸೀಳು ನಾಯಿ, ಅದು ವಿಚ್ ಹಂಟಿಂಗ್ ಏಜೆನ್ಸಿ ಎಂದು ಹೇಳುವ ಮೂಲಕ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಹರಿಹಾಯ್ದಿದ್ದಾರೆ.

Advertisement

ಇಡಿ ಅಧಿಕಾರಿಗಳು, ಮುಡಾ ಸೈಟ್ ಹಂಚಿಕೆಯಲ್ಲಿ ಭಾರಿ ಹಗರಣ ಪತ್ತೆ ವಿಚಾರವಾಗಿ ಗದಗನಲ್ಲಿ ಮಾತನಾಡಿದ ಸಚಿವರು, ಕೇಂದ್ರದ ಕೈಗೊಂಬೆ ಆಗಿರುವ ಇಡಿ ಸೀಳು ನಾಯಿ ಇದ್ದಂತೆ. ಇಡಿ ಎನ್ಸಫೋರ್ಸಮೆಂಟ್ ಡೈರೆಕ್ಟರೇಟ್ ಅಲ್ಲ. ಅದು ರಾಜಕೀಯ ವಿಚ್ಛೇಟಿಂಗ್ ಏಜೆನ್ಸಿ. ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡೋದು. ವಿಪಕ್ಷ ನಾಯಕರ ಬಲಿ ಹಾಕೋದೇ ಇಡಿ ಕೆಲಸ.

ದೇಶಗಳಲ್ಲಿ ಇಲ್ಲಿಯವರೆಗೆ ಯಾರ್ಯಾರ ಮೇಲೆ ಕೇಸ್ ಹಾಕಿದ್ದಾರೆ. ಬರೀ ರಾಜಕೀಯ ವಿರೋಧಿಗಳ ಮೇಲೆ ಮಾತ್ರ ಕೇಸ್ ಹಾಕಿದ್ದಾರೆ. ಶ್ರೀಮಂತರ ಮೇಲೆ, ಬ್ಲ್ಯಾಕ್ ಮನಿ ಕೇಸ್ ಹಾಕಿದ್ದಾರಾ?ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟವ್ರ ಮೇಲೆ ಕೇಸ್ ಹಾಕಿದ್ದಾರಾ!? ಅಂತ ಪ್ರಶ್ನೆ ಮಾಡಿದರು.

ಇಡಿ ಬಿಜೆಪಿ ಅಂಗಸಂಸ್ಥೆಯಾಗಿದೆ. ಈ ಅಂಗಸಂಸ್ಥೆ ಕೆಲಸ ರಾಜಕೀಯ ವಿರೋಧಿಗಳ‌ ಬಲಿ ಹಾಕೋದು.. ಇಡೀ ದೇಶದಲ್ಲಿ ಅವ್ರು ಅದೇ ಮಾಡಿದ್ದಾರೆ ಅಂತ ಸಚಿವರು ಆಕ್ರೋಶ ಹೊರ ಹಾಕಿದ್ದಾರೆ.

ಎಲ್ಲೆಲ್ಲಿ ವಿರೋಧ ಪಕ್ಷಗಳು ಇವೆ. ಪಶ್ಚಿಮ ಬಂಗಾಳ, ತಮಿಳು ನಾಡು, ಕೇರಳ, ದೆಹಲಿ, ಪಂಜಾಬ್, ಛತ್ತಿಸಗಢ ಎಲ್ಲ ಕಡೆ ವಿಪಕ್ಷಗಳ ಮೇಲೆ ಕೇಸ್ ಹಾಕಿದ್ದಾರೆ. ಇಲ್ಲಿಯವರೆಗೆ ಇಡಿ ಎಷ್ಟು ಕೇಸ್ ಹಾಕಿದೆಯೋ 90 ರಷ್ಟು ವಿರೋಧ ಪಕ್ಷಗಳ ಮೇಲೆ ಹಾಕಿದ್ದಾರೆ. ಹಾಕಿರೋ ಕೇಸ್ ನಲ್ಲಿ ಶೇಕಡಾ 1.5 ರಷ್ಟು ಮಾತ್ರ ಶಿಕ್ಷೆ ಆಗಿದೆ. ಅದರಲ್ಲಿ 99 ಕೇಸ್ ಗಳು ಕನ್ವಿಷನ್ ಮಾಡಲು ಆಗಿಲ್ಲ. ಇಡಿ ಕೆಲಸ ಬರೀ ರಾಜಕೀಯ ವಿರೋಧಿಗಳಿಗೆ ಹಿಟ್ ಅಂಡ್ ರನ್ನ ಮಾಡೋದು ಎಂದರು.

ಇನ್ನೂ ರಾಜ್ಯದ ಉಪ ಚುನಾವಣೆಯಲ್ಲಿ ಮೂರು ಸ್ಥಾನ ಗೆದ್ದ ಮೇಲೆ ಬಿಜೆಪಿಗೆ ಸಹಿಸೋಕೆ ಆಗ್ತಿಲ್ಲ. ಅದಕ್ಕೆ ಇಡಿ ಅನ್ನೋ ಸೀಳು ನಾಯನ್ನು ಬಿಟ್ಟಿದ್ದಾರೆ. ದೇಶದಲ್ಲಿ ಇಡಿ ಒಬ್ಬ ಬಿಜೆಪಿ ಮೇಲೆ ಕೇಸ್ ಹಾಕಿದೆಯಾ!? ಬ್ಲ್ಯಾಕ್‌ ಮನಿ‌ ಮಾಡಿದ ಒಬ್ಬ ಶ್ರೀಮಂತರ ಮೇಲೆ ಕೇಸ್ ಹಾಕಿದ್ದಾರಾ ಅಂತ ಪ್ರಶ್ನೆ ಮಾಡಿದರು.

ಬರೀ ರಾಜಕೀಯ ವಿರೋಧಿಗಳ ಮೇಲೆ ಕೇಸ್ ಹಾಕ್ತಿದ್ದರೆ‌‌‌. ಅದು ನೀವು ನಮ್ಮನ್ನ ಕೇಳಿದ್ರೆ ನಾನೇನು ಹೇಳಲಿ. ಇದು ಪೊಲಿಟಿಕಲ್ ಅಟ್ಯಾಕ್. ಬಿಜೆಪಿ ಸೋತು ನಿರಾಸೆಯಾಗಿ ಇಡಿಯನ್ನು ಛೋ ಬಿಟ್ಟಿದೆ. ಅವ್ರನ್ನ ಲೀಗಲ್ ಆಗಿ ಎದುರಿಸುತ್ತೇವೆ. ಜನತಾ ನ್ಯಾಯಾಲಯದಲ್ಲೂ ಪ್ರಜಾಪ್ರಭುತ್ವ ಮುಖಾಂತರ ಎದುರಿಸುತ್ತೇವೆ. ಅವ್ರದ್ದು ಎಲ್ಲಾ ಭೋಗಸ, ಸುಳ್ಳು. ಜನ್ರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ.‌ ಫೇಲ್ ಆಗಿದ್ದಾರೆ. ಆದ್ರೂ ಬಿಡ್ತಿಲ್ಲ. ಇದು ರಾಜಕೀಯ ಪಿತೂರಿ ಎಂದರು.


Spread the love

LEAVE A REPLY

Please enter your comment!
Please enter your name here