HomeEntertainment‘ವಿಜಯಪತಾಕೆ’ ಸಿನಿಮಾದ ಟೀಸರ್ ಬಿಡುಗಡೆ

‘ವಿಜಯಪತಾಕೆ’ ಸಿನಿಮಾದ ಟೀಸರ್ ಬಿಡುಗಡೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಷಣ್ಮುಖಪ್ಪ ಆರ್.ಎಲ್ ಅವರ ಶ್ರೀ ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿರುವ ‘ವಿಜಯಪತಾಕೆ’ ಚಲನಚಿತ್ರದ ಪ್ರಥಮ ಟೀಸರ್ ಬಿಡುಗಡೆ ಕುರಿತು ಪತಿಕಾಗೋಷ್ಠಿ ಗಜೇಂದ್ರಗಡದ ಪ್ರವಾಸಿ ಮಂದಿರದಲ್ಲಿ ಜರುಗಿತು.

ಗಜೇಂದ್ರಗಡದವನೇ ಆದ ನಾನು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿ, ನಿರ್ದೇಶನ ಮಾಡಿದ್ದೇನೆ. ‘ವಿಜಯಪಾತಕೆ’ ಚಿತ್ರವನ್ನು ಉತ್ತರ ಕರ್ನಾಟಕದವರೇ ನಿರ್ಮಿಸಿದ್ದು, ಉತ್ತರ ಕರ್ನಾಟಕದ ಕಲಾವಿದರೇ ಹೆಚ್ಚು ಅಭಿನಯಿಸಿದ್ದಾರೆ. ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. ಇದೀಗ ಉತ್ತರ ಕರ್ನಾಟಕದ ಹೆಸರಾಂತ ಜಾನಪದ ಕಲಾವಿದರಾದ ಮಾಳು ನಿಪನಾಳ ಅವರ ಯೂಟ್ಯೂಬ್‌ನಲ್ಲಿ ಪ್ರಥಮ ಟೀಸರ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಯುವ ನಿರ್ದೇಶಕ ಆರ್.ಶೈನ್ ಹೇಳಿದರು.

ಚಿತ್ರದಲ್ಲಿ ನಾಯಕಿಯಾಗಿ ವಾಣಿ ಬಿಜಾಪೂರ, ಮುಖ್ಯ ಖಳನಾಯಕರಾಗಿ ಶೋಭರಾಜ್ ಅಭಿನಯಿಸಿದ್ದಾರೆ. ಇನ್ನುಳಿದಂತೆ ಹರೀಶ್ ಪತ್ತಾರ, ಆನಂದ.ಕೆ, ಸಂಗನಗೌಡ ಕುರುಡಗಿ, ರಾಜಕುಮಾರ ಪಾಟೀಲ್, ಪಾಲಾಕ್ಷ, ಹುಸೇನ್ ಪತ್ತೇಖಾನ್, ನೇತ್ರಾ, ಅನ್ನಪೂರ್ಣ, ಪ್ರಕೃತಿ, ರಮಜಾನಸಾಬ್ ಉಳ್ಳಾಗಡ್ಡಿ, ಮುಂತಾದವರು ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಹಾಗೂ ನಿರ್ದೇಶನ ಆರ್.ಶೈನ್, ಸಂಗೀತ ರಾಘವ್ ಸುಭಾಸ್, ಸಾಹಿತ್ಯ ಸುಭಾಸ್ ಬೆಟಗೇರಿ, ಹಿನ್ನೆಲೆ ಗಾಯನ ಅಭೀಷೇಕ ಎಮ್.ಆರ್, ಮೇಘನಾ ಹಳಿಯಾಳ ಹಾಗೂ ಸಾತ್ವಿಕ, ಛಾಯಾಗ್ರಹಣ ಗಿರೀಶ್ ಶಿರಗೇನಹಳ್ಳಿ, ಭರತ್, ಶ್ಯಾಮ್, ಸಂಕಲನ ರವಿ ರಾಠೋಡ, ಸಾಹಸ ಸಂತೋಷ ರಾಠೋಡ, ನೃತ್ಯ ಕಂಬಿ ರಾಜು, ವರ್ಣಾಲಂಕಾರ ಶ್ರೀಕಾಂತ್ ಕುಲಕರ್ಣಿ, ವಸ್ತಾçಲಂಕಾರ ಸಾವಿತ್ರಿ ರಂಗ್ರೇಜಿ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಕ್ರಿಯೇಟಿವ್ ಹೆಡ್ ಸಿ.ಜಿ. ವೆಂಕಟೇಶರಾವ್ ಅವರಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟೀಸರ್‌ನ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ನಾಯಕಿ ವಾಣಿ ವಿಜಯಪುರ, ಪಿಆರ್‌ಓ ಡಾ.ಪ್ರಭು ಗಂಜಿಹಾಳ, ಸಂಗನಗೌಡ ಕುರುಡಗಿ, ಹರೀಶ ಪತ್ತಾರ, ಜಯದೇವ ಗಂಜಿಹಾಳ ಸೇರಿದಂತೆ ಚಿತ್ರತಂಡದ ಕಲಾವಿದರು ಪಾಲ್ಗೊಂಡಿದ್ದರು.

 

**ಬಾಕ್ಸ್**

ಧಾರವಾಡ ಜಿಲ್ಲೆಯ ನಿಗದಿ, ಬೆಣಕನಕಟ್ಟೆ, ಮುರಕಟ್ಟಿ ಮತ್ತು ಹಳಿಯಾಳ, ದಾಂಡೇಲಿ, ಗದಗ ಜಿಲ್ಲೆಯ ಗಜೇಂದ್ರಗಡ, ಭೈರಾಪೂರ ಸುತ್ತಮುತ್ತ, ಕೊಪ್ಪಳ ಜಿಲ್ಲೆಯ ಹನುಮಸಾಗರ, ಚಂದಾಲಿAಗೇಶ್ವರ ದೇವಸ್ಥಾನ, ಮತ್ತು ಇಲಕಲ್ ತಾಲೂಕಿನ ಸುಕ್ಷೇತ್ರ ಸಿದ್ಧನಕೊಳ್ಳ, ಕರಾವಳಿ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!