ಏನೇ ಇದ್ರೂ ರಾಹುಲ್ ಗಾಂಧಿ ಹತ್ರ ಖರ್ಗೆಯವರ ಹತ್ರ ಹೋಗಿ ಮಾತಾಡಲಿ: ಡಿ.ಕೆ.ಶಿವಕುಮಾರ್‌ ಕಿಡಿ

0
Spread the love

ಬೆಂಗಳೂರು: ಏನೇ ಇದ್ರೂ ರಾಹುಲ್ ಗಾಂಧಿ ಹತ್ರ ಖರ್ಗೆಯವರ ಹತ್ರ ಹೋಗಿ ಮಾತಾಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರು. ಖರ್ಗೆ ಅವರನ್ನೇ ಇವರು ಪ್ರಶ್ನೆ ಮಾಡ್ತಾರಾ? ಹೀಗೆ ಮಾತಾಡೋದು ಸರಿಯಲ್ಲ. ಯಾವುದಾದರೂ ವಿಚಾರ ಇದ್ದರೆ ನಾನೇ ಕರೆದು ಪ್ರೆಸ್‌ಗೆ ಹೇಳ್ತೀನಿ.

Advertisement

ಪಕ್ಷ ಕಟ್ಟುವಂಥದ್ದು ಉಳಿಸಿಕೊಳ್ಳುವುದು ಕಾಪಾಡುವುದು ಎಲ್ಲರಿಗೂ ಪಾಠ ಹೇಳಿದ್ದಾರೆ. ಯಾರೂ ಕೂಡ ಮಾತಾಡಬಾರದು ಎಂದು ಹೇಳಿದ್ದಾರೆ. ನಾಳೆ ಎಐಸಿಸಿ ಸುರ್ಜೆವಾಲಾ ಬೆಳಗಾವಿಗೆ ಬರ್ತಿದ್ದಾರೆ. ಪಾರ್ಟಿ ವಿಚಾರ ಮಾಧ್ಯಮದಲ್ಲಿ ಮಾತಾಡುವುದಲ್ಲ. ಏನೇ ಇದ್ರೂ ರಾಹುಲ್ ಗಾಂಧಿ ಹತ್ರ ಖರ್ಗೆಯವರ ಹತ್ರ ಹೋಗಿ ಮಾತಾಡಲಿ ಎಂದು ಟಾಂಗ್‌ ಕೊಟ್ಟಿದ್ದಾರೆ.

 


Spread the love

LEAVE A REPLY

Please enter your comment!
Please enter your name here