ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳು ಈಗ 6 ಮಂದಿ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಗ್ರ್ಯಾಂಡ್ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಬಿಗ್ ಬಾಸ್ ಒಂದು ಚಟುವಟಿಕೆ ನೀಡಲಾಗಿದೆ. ಈ ಚಟುವಟಿಕೆ ವೇಳೆ ಮಂಜು ಅವರು ರಜತ್ ಮೇಲೆ ಕೋಪ ತೀರಿಸಿಕೊಂಡಿದ್ದಾರೆ.
ಹೌದು ಮನೆಯೊಳಗೆ ನಮಗೆ, ಯಾರ ಮೇಲೆ ಕೋಪ ಇದೆಯೋ ಅವರ ಫೋಟೋವನ್ನು ಗೊಂಬೆ ತಲೆಯಾಗಿರುವ ಮಡಿಕೆಗೆ ಅಂಟಿಸಿ, ಕೋಲಿನಿಂದ ಹೊಡೆಯಬೇಕು ಎಂದು ಟಾಸ್ಕ್ ಕೊಡಲಾಗಿದೆ.
ಈ ಟಾಸ್ಕ್ನಲ್ಲಿ ಭವ್ಯ ಅವರು ತ್ರಿವಿಕ್ರಮ್ ಅವರ ಫೋಟೋ ಅಂಟಿಸಿ ತಮಗೆ ಇಷ್ಟ ಬಂದಂತೆ ಹೊಡೆದಿದ್ದಾರೆ. ಇದರಿಂದ ಈ ಇಬ್ಬರ ಮಧ್ಯೆದ ಸ್ನೇಹ ಯಾವುದು ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಮೋಕ್ಷಿತಾ ಕೂಡ ತ್ರಿವಿಕ್ರಮ್ ಫೋಟೋಗೆ ದೊಡ್ಡ ಏಟು ಹಾಕಿ ಮಡಿಕೆಯನ್ನು ಪುಡಿ ಪುಡಿ ಮಾಡಿದ್ದಾರೆ. ಇದರಿಂದ ಮನೆಯಲ್ಲಿ ತ್ರಿವಿಕ್ರಮ್ ಮೇಲೆ ಕೋಪ-ತಾಪ,
ಹತಾಶೆ ಎಲ್ಲವನ್ನು ಭವ್ಯ, ಮೋಕ್ಷಿತಾ ಇಟ್ಟುಕೊಂಡಿದ್ದರು ಎನ್ನುವುದು ಸ್ಪಷ್ಟವಾಗಿದೆ. ಇನ್ನು ಉಗ್ರಂ ಮಂಜು, ರಜತ್ ಫೋಟೋಗೆ ಹೊಡೆದು ಕೆಂಡ ಕಾರಿದ್ದಾರೆ. ರಜತ್ ಹಾಗೂ ಮಂಜುವಿನ ನಡುವೆ ದೊಡ್ಡ ಮಾತಿನ ಸಮರವೇ ನಡೆದಿದೆ. ಮನೆಯಲ್ಲಿ ಈ ಹಿಂದೆ ನಡೆದಂತ ಕೆಲ ಘಟನೆಗಳನ್ನ ನೆನಪಿಸಿ ಇಬ್ಬರು ಬೈದಾಡಿಕೊಂಡಿದ್ದಾರೆ.