ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಚಾಲನಾ ಸಿಬ್ಬಂದಿಗಳ ದಿನದಂದು ವಾ.ಕ.ರ.ಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ. ಅವರು ಹೊಸೂರು ಬಸ್ ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿ ಕರ್ತವ್ಯನಿರತ ಚಾಲನಾ ಸಿಬ್ಬಂದಿಗಳಿಗೆ ಹೂವು ಮತ್ತು ಸಿಹಿಯನ್ನು ಹಂಚಿ ಶುಭಾಶಗಳನ್ನು ತಿಳಿಸಿದರು.
ಕರ್ತವ್ಯನಿರತ ಚಾಲಕರನ್ನು ಉದ್ದೇಶಿಸಿ ಪ್ರಿಯಾಂಗಾ ಎಂ. ಅವರು ಮಾತನಾಡಿ, ಪ್ರತಿದಿನ ಸಾರಿಗೆ ಕಾರ್ಯಾಚರಣೆಯು ನಡೆಯುತ್ತಿರುತ್ತದೆ. ನಿರಂತರವಾಗಿ ಕೆಲಸ ನಡೆಯುವುದರ ಮೂಲಕ ವಿಶ್ರಾಂತಿ ರಹಿತ ಸೇವೆಯನ್ನು ಸಾರ್ವಜನಿಕರಿಗೆ ನಮ್ಮ ಚಾಲನಾ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಚ್.ರಾಮನಗೌಡರ, ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾದ ಶಶೀಧರ ಕುಂಬಾರ, ವಿಭಾಗೀಯ ಸಂಚಾರ ಅಧಿಕಾರಿಗಳಾದ ಕೆ.ಎಲ್. ಗುಡೆನ್ನವರ, ಅಧಿಕಾರಿಗಳಾದ ರವಿ ಅಂಚಗಾವಿ, ನವೀನಕುಮಾರ ತಿಪ್ಪಾ ಸೇರಿದಂತೆ ಕರ್ತವ್ಯನಿರತ ಚಾಲನಾ ಸಿಬ್ಬಂದಿಗಳು ಉಪಸ್ಥಿತರಿದ್ದರು.