ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ತಿಮ್ಮಾಪೂರ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜ್ರಂಭಣೆಯಿAದ ನೆರವೇರಿತು. ಬೆಳಿಗ್ಗೆ 10 ಗಂಟೆಗೆ ಸಕಲ ಮಂಗಳ ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ, ಗಂಗಾ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುಡಿಯನ್ನು ತಲುಪಿತು.
ಮಧ್ಯಾಹ್ನ ನೂರಾರು ಭಕ್ತರು ಮಹಾಪ್ರಸಾದವನ್ನು ಸ್ವೀಕರಿಸಿದರು. ರಾತ್ರಿ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ರಸಮಂಜರಿ ಕಾರ್ಯಕ್ರಮವನ್ನು ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಬಾಬರಿ ಉದ್ಘಾಟಿಸಿದರು.
ಬೀರಲಿಂಗೇಶ್ವರ ಜಾತ್ರಾ ಕಮಿಟಿ ಸದಸ್ಯರಾದ ರಮೇಶ ಬನಾಪೂರ, ಬಸವರಾಜ ದೇವರವರ, ಶಿವಾನಂದ ಡಂಬಳ, ಚಂದ್ರು ಆಲೂರ, ಹನುಮಪ್ಪ ಬೀಚಗಲ್ಲ, ಮಾರುತಿ ಕಟಗಿ, ಮಂಜುನಾಥ ಕೊಪ್ಪಳ, ಶ್ರೀಕಾಂತ ಬಾಬರಿ, ಮಾರುತಿ ಹಚ್ಚಪ್ಪನವರ, ಬೀರಪ್ಪ ಬಂಡಿಹಾಳ, ಮಲ್ಲಪ್ಪ ಡಂಬಳ, ಬೀರಪ್ಪ ಬನಾಪೂರ, ಹನುಮಪ್ಪ ಬಿಚಗಲ್ಲ, ಮಾರುತಿ ಗಾಜಿ, ಶರಣಪ್ಪ ಜೋಗಿನ, ಶ್ರೀನಿವಾಸ ಗಾಜಿ, ಹನುಮಪ್ಪ ಜೋಗಿನ, ಮಲ್ಲಪ್ಪ ಜೋಗಿನ, ಮಂಜು ವೀರಾಪುರ ಮುಂತಾದವರಿದ್ದರು. ಗೂಳಪ್ಪ ಹಚ್ಚಪ್ಪನವರ ಕಾರ್ಯಕ್ರಮ ನಿರೂಪಿಸಿದರು.