ಮಿಸ್ಟರ್ ಸುಧಾಕರ್ ರಾಜ್ಯಾಧ್ಯಕ್ಷರ ಬಗ್ಗೆ ಮಾತನಾಡಿದ್ರೆ ನಿನ್ನ ಬಂಡವಾಳ ಬಿಚ್ಚಿಡುತ್ತೇನೆ: ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ

0
Spread the love

ದಾವಣಗೆರೆ: ಮಿಸ್ಟರ್ ಸುಧಾಕರ್ ರಾಜ್ಯಾಧ್ಯಕ್ಷರ ಬಗ್ಗೆ ಮಾತನಾಡಿದ್ರೆ ನಿನ್ನ ಬಂಡವಾಳ ಬಿಚ್ಚಿಡುತ್ತೇನೆ ಎಂದು ಸಂಸದ ಡಾ. ಕೆ. ಸುಧಾಕರ್ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ಬಗ್ಗೆ ಮಾತಾಡಿದ್ರೆ ಹುಷಾರ್, ನಿನ್ನ ಬಂಡವಾಳ ಬಯಲು ಮಾಡುವೆ ಅಂತ ಎಚ್ಚರಿಕೆ ನೀಡಿದ್ದಾರೆ.

Advertisement

ನಿಮ್ಮ ಹೋರಾಟ ಕಾಂಗ್ರೆಸ್ ವಿರುದ್ದ ಇರುಬೇಕು. ಅದರ ಬದಲು ವಿಜಯೇಂದ್ರ ವಿರುದ್ದ ಮಾತಾಡುತ್ತಿದ್ದೀರಾ? ನಿಮಗೆ ತಾಕತ್ತಿದ್ದರೇ ಕನಕಪುರ, ವರುಣಾದಲ್ಲಿ ಪಾದಯಾತ್ರೆ ಮಾಡಿ. ಇದನ್ನ ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ಧ ವಾಗ್ದಾಳಿ ಸರಿಯಲ್ಲ ಅಂತ ಯತ್ನಾಳ್ ವಿರುದ್ದವೂ ರೇಣುಕಾಚಾರ್ಯ ಅಕ್ರೋಶ ಹೊರ ಹಾಕಿದ್ದಾರೆ.

ಇನ್ನೂ ಸುಧಾಕರನಂತಹ ವ್ಯಕ್ತಿಯಿಂದಲೇ ನಾವುಗಳು ಸೋತಿದ್ದು. ಇವರು ನಡೆದುಕೊಂಡ ರೀತಿಯಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಡಾ. ಸುಧಾಕರ್ ಪಕ್ಷಕ್ಕೆ ಒಂದು ಐರನ್ ಲೇಗ್ ಅಂತ ಆರೋಪಿಸಿದ್ದಾರೆ.

ನಾನು ಜಗಳ ಮಾಡಿದ್ದಕ್ಕೆ ಹೊನ್ನಾಳಿಗೆ ಎರಡು ನೂರು ಹಾಸಿಗೆಯ ಆಸ್ಪತ್ರೆ ತಂದೆ. ಧ್ವನಿ ಸತ್ತ ಶಾಸಕರು ಯಾರು ಕೂಡ ಹೇಳುತ್ತಿರಲಿಲ್ಲ. ದಾವಣಗೆರೆಗೆ ಜಯದೇವ ಆಸ್ಪತ್ರೆ ಶಾಖೆ ಮಂಜೂರು ಮಾಡಿದ್ದು ಯಡಿಯೂರಪ್ಪ, ಆದ್ರೆ ಅದನ್ನ ರದ್ದು ಮಾಡಿದ್ದು ಸುಧಾಕರ್ ಅಂತ ರೇಣುಕಾಚಾರ್ಯ ಆರೋಪಿಸಿದ್ರು.

 


Spread the love

LEAVE A REPLY

Please enter your comment!
Please enter your name here