ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಶಿರಹಟ್ಟಿಯ 13ನೇ ಪಟ್ಟಾಧ್ಯಕ್ಷರಾದ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿಗಳ 75ನೇ ಜನ್ಮ ದಿನಾಚರಣೆಯನ್ನು ಇಲ್ಲಿಯ ಫಕೀರೇಶ್ವರ ಶಾಖಾಮಠದಲ್ಲಿ ಆಚರಿಸಲಾಯಿತು.
ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಿರಹಟ್ಟಿ ಫಕೀರೇಶ್ವರ ಮಠವು ಈ ನಾಡು ಕಂಡ ವಿಶೇಷ ಮಠವಾಗಿದ್ದು, ಸರ್ವ ಧರ್ಮಗಳ ಸಂಕೇತವಾಗಿದೆ. 13ನೇ ಪಟ್ಟಾಧ್ಯಕ್ಷರಾದ ಫಕೀರ ಸಿದ್ಧರಾಮ ಸ್ವಾಮೀಜಿಗಳಿಗೆ ದೇವರು ನೂರು ವರ್ಷ ಆರೋಗ್ಯವನ್ನು ನೀಡಿ ಭಕ್ತರಿಗೆ ಆಶಿರ್ವಾದ ನೀಡಲಿ ಎಂದು ಶುಭ ಕೋರಿದರು.
ಶಾಖಾಮಠದ ಸಂಚಾಲಕ ಅಮೃತ ಮಂಟೂರು ಮಾತನಾಡಿ, ಭಾವ್ಯಕ್ಯೆತೆಯ ಶಿರಹಟ್ಟಿ ಮಠದ 13ನೇ ಪಟ್ಟಾಧಿಕಾರಿಗಳಾದ ಫಕೀರ ಸಿದ್ಧರಾಮ ಸ್ವಾಮೀಜಿಗಳ 75ನೇ ಜನ್ಮದಿನವನ್ನು ಆಚರಿಸುವುದರ ಮೂಲಕ ಗ್ರಾಮದಲ್ಲಿ ಶಾಖಾಮಠವನ್ನು ಬೆಳಕಿಗೆ ತರಲು ಪ್ರಯತ್ನಿಸಲಾಗುತ್ತಿದ್ದು, ಭಕ್ತರು ಸಹಾಯ-ಸಹಕಾರ ನೀಡಬೇಕು. ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಲು ಶ್ರೀ ಮಠದಿಂದ ಶಿಕ್ಷಣ ಕೇಂದ್ರವನ್ನು ತೆರೆಯುವ ಅಭಿಲಾಷೆಯನ್ನು ಹೊಂದಲಾಗಿದ್ದು, ಇಲ್ಲಿ ಕಲಿತ ಮಕ್ಕಳು ಐ.ಎ.ಎಸ್, ಕೆ.ಎ.ಎಸ್. ಹಾಗೂ ವಿಜ್ಞಾನಿಗಳಾಗುವ ಕನಸನ್ನು ಕಂಡಿದ್ದೇವೆ ಎಂದರು.
ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ದೇವಪ್ಪ ಗರ್ಜಪ್ಪನವರ, ಮಲ್ಲಪ್ಪ ಮುಳಗುಂದ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.