ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜರುಗಿದ 33ನೇ ರಾಜ್ಯ ಮಟ್ಟದ ಪ್ಯಾರಾ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಮಹಾಂತೇಶ ಬೇವೂರ ಅವರು ಎಫ್ 56 ವಿಭಾಗದಲ್ಲಿ ಜಾವಲಿನ್(ಬರ್ಚಿ) ಎಸೆತದಲ್ಲಿ ಬಂಗಾರದ ಪದಕದೊಂದಿಗೆ ಪ್ರಥಮ ಸ್ಥಾನ ಹಾಗೂ ಡಿಸ್ಕಸ್ (ಚಕ್ರ) ಎಸೆತದಲ್ಲಿ ಕಂಚಿನ ಪದಕದೊಂದಿಗೆ ತೃತೀಯ ಸ್ಥಾನ ಪಡೆದು ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಫೆ. 17ರಿಂದ 20ವರೆಗೆ ಚೆನೈನಲ್ಲಿ ನಡೆಯಲಿರುವ 23ನೇ ರಾಷ್ಟ್ರಮಟ್ಟದ ಅಂಗವಿಲರ ಓಲಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
Advertisement
ಸಾಧಕ ಕ್ರೀಡಾಪಟುವಿಗೆ, ತರಬೇತಿ ನೀಡಿದ ಫೀನಿಕ್ಸ್ ಸ್ಪೋರ್ಟ್ಸ್ ಕ್ಲಬ್ನ ಮುಖ್ಯ ತರಬೇತುದಾರರಾದ ರಿಚರ್ಡ್ ಧರ್ಮದಾಸರಿಗೆ ಆನಂದ ಬೇಂದ್ರೆ, ನಾಸೀರುದ್ದೀನಶಾ ಮಕಾಂದರ, ಚಂದ್ರಪ್ಪ ಭರಮಣ್ಣವರ, ಸುನೀಲ ಯಂಕಣ್ಣವರ, ಮಂಜುನಾಥ ಪಂತಾರ, ಚೇತನಕುಮಾರ ಆಮ್ರದ ಅಭಿನಂದನೆ ಸಲ್ಲಿಸಿದ್ದಾರೆ.