HomeEntertainmentಮದುವೆ ಬಗ್ಗೆ ಲೇವಡಿ ಮಾಡಿದವರಿಗೆ ಸ್ಪಷ್ಟನೆ ನೀಡಿದ ಡಾಲಿ ಧನಂಜಯ್‌

ಮದುವೆ ಬಗ್ಗೆ ಲೇವಡಿ ಮಾಡಿದವರಿಗೆ ಸ್ಪಷ್ಟನೆ ನೀಡಿದ ಡಾಲಿ ಧನಂಜಯ್‌

For Dai;y Updates Join Our whatsapp Group

Spread the love

ಸ್ಯಾಂಡಲ್‌ ವುಡ್‌ ನಟ ಡಾಲಿ ಧನಂಜಯ್‌ ಮೈಸೂರಿನಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಡವರ ಮನೆ ಮಕ್ಕಳ ಮದುವೆ ಅಂದರೆ ಹೀಗಿರಬೇಕು ಎಂದು ಡಾಲಿ ಹಾಗೂ ಧನ್ಯತಾ ಮದುವೆಯನ್ನು ಸಾಕಷ್ಟು ಮಂದಿ ಹೊಗಳುತ್ತಿದ್ದಾರೆ. ಡಾಲಿ ಮದುವೆಗೆ ಹಲವು ಗಣ್ಯರು, ಅಭಿಮಾನಿಗಳು, ಸ್ನೇಹಿತರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಈ ಮಧ್ಯೆ ಡಾಲಿ ಮದುವೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹಲವರು ಲೇವಡಿ ಮಾಡಿದ್ದು ಆ ಬಗ್ಗೆ ಡಾಲಿ ಸ್ಪಷ್ಟನೆ ನೀಡಿದ್ದಾರೆ.

ಹಿರಿಯರಿಗೆ ಕೆಲವು ನಂಬಿಕೆಗಳಿಂದ ಖುಷಿ ಸಿಗುತ್ತೆ ಅಂತಾದರೆ ಅದನ್ನು ಪಾಲಿಸುವುದು ತಪ್ಪು ಅಂತಾ ನನಗೆ ಅನಿಸಿಲ್ಲ. ಎಲ್ಲದಕ್ಕೂ ಉತ್ತರ ಕೊಡಲು ಬರಲ್ಲ. ಆದರೆ ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ಮಾತನಾಡುತ್ತೇನೆ ಎಂದು ಮಾಧ್ಯಮಗಳ ಮುಂದೆ ಡಾಲಿ ಧನಂಜಯ್‌ ಮಾತನಾಡಿದ್ದಾರೆ.

ಕಾಯುವಂತಹ ನಂಬಿಕೆಗಳು ಬೇರೆ. ಮೂಢನಂಬಿಕೆಗಳು ಬೇರೆ. ಆಚರಣೆ ಅಂತಾ ಬಂದಾಗ ನಮ್ಮ ಸಮಾಜದಲ್ಲಿ ತುಂಬಾ ತರಹದ ಆಚರಣೆಗಳಿವೆ. ಉದಾಹರಣೆಗೆ ನಮ್ಮ ಚಿಕ್ಕಪ್ಪ ಮದುವೆ ಸಂದರ್ಭದಲ್ಲಿ ಕೊಂಡ ಹಾಯುವ ಪೂಜೆ ಮಾಡಿದರು. ಅದನ್ನ ಯಾರು ಯಾವ್ಯಾವ ಪದ್ದತಿಯಲ್ಲಿ ಮಾಡೋದು ಅಂತಾ ಗೊತ್ತಿಲ್ಲ. ನಮ್ಮ ಚಿಕ್ಕಪ್ಪ ತುಂಬಾನೇ ಚೆನ್ನಾಗಿ ಮಾಡಿದರು.

ಕೊಂಡ ಹಾಯೋದನ್ನು ನಾನು ತುಂಬಾ ಚಿಕ್ಕವನಿಂದಲೂ ನೋಡಿಕೊಂಡು ಬಂದಿದ್ದೇನೆ. ಜಾತ್ರೆಯ ಜನಸಾಗರದಲ್ಲಿ ನಿಂತು ಎಂಜಾಯ್ ಮಾಡಿದ್ದೇನೆ. ನನಗೆ ಅದು ಜಾನಪದ. ಅಲ್ಲಿ ನನಗೆ ತಪ್ಪು ಕಂಡು ಬಂದಿಲ್ಲ. ನಾನು ವಿಜ್ಞಾನ ನಂಬುತ್ತೇನೆ, ನನ್ನ ಸೈನ್ಸ್ ನನಗೆ ಗೊತ್ತು. ನನ್ನ ಜೀವನದ ಕತೆಯೊಂದನ್ನು ನಿಮಗೆ ಹೇಳುತ್ತೇನೆ. ನನ್ನ ತಾಯಿಗೆ ಒಂದು ಆಪರೇಷನ್ ನಡೆದಿತ್ತು. ಸೈನ್ಸ್​ ಪ್ರಕಾರ ಅದೊಂದು ಸಣ್ಣ ಶಸ್ತ್ರಚಿಕಿತ್ಸೆ ಅಷ್ಟೇ. ಆದರೆ, ನನ್ನ ತಾಯಿ ಆಕೆ ನಂಬುವ ಜೇನುಕಲ್ಲ ಸಿದ್ದಪ್ಪನನ್ನು ಆ ಅವಧಿಯಲ್ಲಿ ಸ್ಮರಿಸುತ್ತಿದ್ದರು. ಆಪರೇಷನ್ ಥಿಯೇಟರ್​ಗೆ ಹೋಗುವ ಸಂದರ್ಭದಲ್ಲಿ ಜೇನುಕಲ್ಲ ಸಿದ್ದಪ್ಪ ಎಂದು ಜಪಿಸುತ್ತಿದ್ದರು. ಅದು ಅವರ ನಂಬಿಕೆ. ಅದೊಂದು ಶಕ್ತಿ ಎಂದರು.

ಇಲ್ಲಿ ಎಲ್ಲವನ್ನೂ ಒಂದೇ ರೀತಿ ನೋಡೋಕೆ ಆಗಲ್ಲ. ಒಂದೇ ರೀತಿ ನೋಡಿದಾಗ ನಾವು, ನೀವು ಒಟ್ಟಿಗೆ ಹೋಗೋಕೆ ಸಾಧ್ಯವೇ ಇಲ್ಲ. ನನ್ನ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ಗೌರವಿಸುತ್ತೇನೆ. ನನ್ನನ್ನು ಪ್ರಶ್ನೆ ಮಾಡ್ತಿರೋರಿಗೂ ಧನ್ಯವಾದ ತಿಳಿಸುತ್ತೇನೆ. ನನಗೆ ನಿಮ್ಮ ಆಶೀರ್ವಾದ ಬೇಕು. ನಾನು ಕೂಡ ಕಲಿಯುತ್ತ ಇರುತ್ತೇನೆ ಎಂದು ಡಾಲಿ ಧನಂಜಯ್‌ ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!