ಬೆಂಗಳೂರು:- ವ್ಯಕ್ತಿಯೋರ್ವ ವಿಚಿತ್ರ ವರ್ತನೆ ತೋರಿ ವಿದ್ಯುತ್ ತಂತಿ ಹಿಡಿದುಕೊಳ್ಳಲು ಯತ್ನಿಸಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಜರುಗಿದೆ.
Advertisement
ಆನೇಕಲ್ ತಾಲೂಕಿನ ಜಿಗಣಿಯ ಡಬಲ್ ರೋಡ್ ರಸ್ತೆಯ ಒಟಿಸಿ ಸರ್ಕಲ್ ಬಳಿ ಮಾನಸಿಕ ಅಸ್ವಸ್ಥನಂತೆ ವರ್ತಿಸಿ ವ್ಯಕ್ತಿಯೋರ್ವ ಹುಚ್ಚಾಟ ಮೆರೆದಿದ್ದಾನೆ. ಜಾರ್ಖಂಡ್ನ ರಾಂಚಿ ಮೂಲದ ರಾಜು ಮುಂಡಾನಿಂದ ಈ ಹುಚ್ಚಾಟ ನಡೆದಿದೆ.
ಎಳನೀರು ಕುಡಿಯುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಬಳಿಕ ಬಿಲ್ಡಿಂಗ್ ಮೇಲೆ ಏರಿ ವಿದ್ಯುತ್ ತಂತಿ ಹಿಡಿದುಕೊಳ್ಳಲು ಯತ್ನಿಸಿದ್ದಾನೆ. ಕೆಳಗೆ ಜಿಗಿಯೋದಾಗಿ ಹೇಳಿ ಕೆಲ ಸಮಯ ಆತಂಕ ಸೃಷ್ಟಿಸಿದ್ದ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದಿದ್ದ ಜಿಗಣಿ ಪೊಲೀಸರು, ಕೂಡಲೇ ಕರೆಂಟ್ ಆಫ್ ಮಾಡಿಸಿದ್ದಾರೆ.
ಒಟ್ಟಾರೆ ಕೂದಲೆಳೆ ಅಂತರದಲ್ಲಿ ವ್ಯಕ್ತಿ ಜೀವಪಾಯದಿಂದ ಪಾರಾಗಿದ್ದಾರೆ.