ಐಪಿಎಲ್ ಬೆಟ್ಟಿಂಗ್; ಪ್ರತ್ಯೇಕ ದಾಳಿ ಮೂವರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಸೋಮವಾರ ನೆಡೆದ ಗುಜರಾತಿನ ಅಹಮದಾಬಾದ್ ನ‌ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಸ್ಕೋರ್ ಹಾಗೂ ಫಲಿತಾಂಶದ ಮೇಲೆ ಬೆಟ್ಟಿಂಗ್ ನಲ್ಲಿ ತೊಡಗಿದ್ದವರ ಮೇಲೆ ಗದಗ ಸೈಬರ್ ಪೊಲೀಸರು, ಹಾಗೂ ರೋಣ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.

ರೋಣ ಪಟ್ಟಣದ ಜಕ್ಕಲಿ ಕ್ರಾಸ್ ನಲ್ಲಿ ಲೋಕೇಶ್ ನಾಗಪ್ಪ ಕುಂಬಾರ ಎಂಬಾತ ಸಾವಿರಕ್ಕೆ ಎರಡು ಸಾವಿರ ಕೊಡುವುದಾಗಿ ಜನರಿಂದ ಹಣ ಪಡೆದು ಬೆಟ್ಟಿಂಗ್ ನಲ್ಲಿ ತೊಡಗಿದ್ದಾಗ ಪಿಎಸ್ಐ ವಿನೋದ ಪೂಜಾರಿ ಹಾಗೂ ಸಿಬ್ಬಂದಿ ದಾಳಿ ಬಂಧಿಸಿ, ಆತನಿಂದ 2500 ರಷ್ಟು ಮೌಲ್ಯದ ಮೊಬೈಲ್ ಹಾಗೂ ‌ನಗದು ವಶಪಡಿಸಿಕೊಳ್ಳಲಾಗಿದೆ. ರೋಣದಲ್ಲಿ ನಡೆಯುವ ಬೆಟ್ಟಿಂಗ್ ಹಣ ಪಡೆಯುವ ಮುಖ್ಯ ಬುಕ್ಕಿ ಜಗ್ಗು@ ಜಗದೀಶ್ ಬಸವರಾಜ್ ಕುಂಬಾರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗದಗನಲ್ಲಿ ನಡೆದ ಪ್ರಕರಣದಲ್ಲಿ ಸೈಬರ್ ವಿಭಾಗದ ಪೊಲೀಸರು ದಾಳಿ ಮಾಡಿ ಇಬ್ಬರು ವರ್ತಕರನ್ನು ಬಂಧಿಸಿ ಅಪಾರ ಪ್ರಮಾಣದ ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ನಗರದ ಮಕಾನಗಲ್ಲಿಯ ಸಾಯಿಬಾಬಾ ಟ್ರೇಡರ್ಸ್ ಮುಂದೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ತೌಶೀಪ್ ದಸ್ತಗೀರಸಾಬ ಕಾಗದಗಾರ ಹಾಗೂ ಅಣ್ಣಿಗೇರಿಯ ಗಿರೀಶ್ ಬಸವರಾಜ್ ಕೊರ್ಲಹಳ್ಳಿ ಎಂಬುವವರನ್ನು ಮೊಬೈಲ್ ಮೂಲಕ ಜನರಿಂದ ಹಣ ಹಚ್ಚಿಸಿಕೊಂಡು ಬೆಟ್ಟಿಂಗ್ ನಲ್ಲಿ ತೊಡಗಿದ್ದ ಖಚಿತ ಮಾಹಿತಿ ಪಡೆದ ಸೈಬರ್ ಪೊಲೀಸ್ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿ ಅವರಿಂದ 33500 ರೂ, ನಗದು, ಒಂದು ಮೊಬೈಲ್ ವಶಪಪಡಿಸಿಕೊಂಡಿದ್ದಾರೆ.

ಇವರಿಬ್ಬರು ಪಡೆದ ಹಣ ಪ್ರಮುಖ ಬುಕ್ಕಿ ಗುರುಪ್ರಸಾದ ಚನ್ನಪ್ಪ ಪವಾಡಶೆಟ್ಟರ ಎಂಬಾತನಿಗೆ ರವಾನಿಸುತ್ತಿದ್ದರು ಎಂದು ಆರೋಪಿಗಳು ಹೇಳಿದ ಮಾಹಿತಿಯಿಂದಾಗಿ ಗುರುಪ್ರಸಾದ ಮೇಲೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.


Spread the love

LEAVE A REPLY

Please enter your comment!
Please enter your name here