ಕ್ರಿಕೆಟಿಗ ಯಜುವೇಂದ್ರ ಚಾಹಲ್ ಹಾಗೂ ನಟಿ ಧನಶ್ರೀ ಮಾರ್ಚ್ 20ರಂದು ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ದಂಪತಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಚಾಹಲ್ ಹಾಗೂ ಧನಶ್ರೀ ದಾಂಪತ್ಯ ಕೊನೆ ಆದ ಕೆಲವೇ ದಿನಗಳಲ್ಲಿ ಇವರ ವಿಚ್ಛೇದನದ ಅರ್ಜಿ ವೈರಲ್ ಆಗಿತ್ತು. ಇದರಲ್ಲಿ ಕೆಲವು ಶಾಕಿಂಗ್ ವಿಚಾರಗಳು ರಿವೀಲ್ ಆಗಿದ್ದು, ಇದನ್ನು ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಹಿಂದೂ ವಿವಾಹ ಕಾಯ್ದೆ ಪ್ರಕಾರ ಅರ್ಜಿ ಸಲ್ಲಿದ ತಕ್ಷಣ ವಿಚ್ಛೇದನ ಸಿಗೋದಿಲ್ಲ. ವಿಚಾರಣೆ ನಡೆಸಿದ ನ್ಯಾಯಾಲಯ ಪತಿ-ಪತ್ನಿ ಸರಿ ಹೋಗಬಹುದು ಎಂಬ ಕಾರಣಕ್ಕೆ ಮತ್ತೆ ಆರು ತಿಂಗಳು ಸಮಯಾವಕಾಶವನ್ನು ನೀಡುತ್ತದೆ. ಆದರೆ ಧನಶ್ರೀ ಹಾಗೂ ಚಾಹಲ್ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ ತಕ್ಷಣವೇ ವಿಚ್ಛೇದನ ಬೇಕು ಎಂದಿದ್ದು ಬಳಿಕ ದಂಪತಿ ಬಾಂಬೆ ಹೈಕೋರ್ಟ್ಗೆ ತೆರಳಿ ‘ನಾವಿಬ್ಬರೂ ಒಪ್ಪಿಯೇ ವಿಚ್ಛೇದನ ಪಡೆಯುತ್ತಿದ್ದೇವೆ. ಆರು ತಿಂಗಳ ಕಾಯುವಿಕೆ ನಮಗೆ ಅಗತ್ಯವಿಲ್ಲ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಕೌಟುಂಬಿಕ ನ್ಯಾಯಾಲಯಕ್ಕೆ ತಕ್ಷಣವೇ ಈ ದಂಪತಿಗೆ ವಿಚ್ಛೇದನ ನೀಡಲು ಸೂಚಿಸಿತ್ತು
ಇದೀಗ ಅರ್ಜಿಯಲ್ಲಿ ಉಲ್ಲೇಖಿಸಿದ ಮತ್ತೊಂದು ಶಾಕಿಂಗ್ ವಿಚಾರ ಬಯಲಾಗಿದೆ. 2020ರ ಡಿಸೆಂಬರ್ನಲ್ಲಿ ಚಾಹಲ್ ಹಾಗೂ ಧನಶ್ರೀ ಮದುವೆಯಾಗಿದ್ದು, ಜೂನ್ 2022ರಂದು ಬೇರೆ ಬೇರೆಯಾಗಿದ್ದರು. ಅಂದರೆ ಮದುವೆಯಾದ ಕೇವಲ 19 ತಿಂಗಳಿಗೆ ದೂರ ದೂರವಾದರು. ಈ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.