ದೇವರ ಹೆಸರಿನಲ್ಲಿ ಮೌಢ್ಯಗಳಿಗೆ ಬಲಿಯಗದಿರಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಜನರಲ್ಲಿ ಧಾರ್ಮಿಕ ಭಾವನೆ, ಭಯ-ಭಕ್ತಿ ಮೂಡಿಸಿ ಸನ್ಮಾರ್ಗದತ್ತ ಕೊಂಡ್ಯುಯುವ ಶೃದ್ಧಾ ಮತ್ತು ಶಕ್ತಿ ಕೇಂದ್ರಗಳಾಗಿವೆ. ಜನತೆ ದೇವರ ಹೆಸರಿನಲ್ಲಿ ಮೌಢ್ಯಗಳಿಗೆ ಬಲಿಯಗದೇ ಶೈಕ್ಷಣಿಕ, ವೈಜ್ಞಾನಿಕ ಜ್ಞಾನ ಹೊಂದಬೇಕು ಎಂದು ಕಾಗಿನೆಲೆ ಕನಕಗುರುಪೀಠದ ಜ.ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

Advertisement

ಅವರು ಶನಿವಾರ ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ನಿರ್ಮಾಣಗೊಂಡ ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನ ಮತ್ತು ಶಿಬಾರ ಉದ್ಘಾಟನೆ, ದುರ್ಗಾದೇವಿ ದೇವಸ್ಥಾನದ 48ನೇ ದಿನದ ಮಹಾಮಂಡಲ ಪೂಜಾ ಕಾರ್ಯಕ್ರಮ ಹಾಗೂ ತುಲಾಬಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯನ ಬದುಕು ಮೌಲ್ಯಯುತ ಮತ್ತು ಸ್ಮರಣೀಯವಾಗಿರಲು ಧರ್ಮದ ತಳಹದಿಯಲ್ಲಿ ಸಾಗಬೇಕು. ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ಆಚರಣೆ, ಪದ್ಧತಿಗಳು ಮುಂದುವರೆಯಬೇಕು. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ಸತ್ಯವನ್ನರಿತ ಸರಕಾರಗಳು ಮುಖ್ಯವಾಗಿ ಹಿಂದುಳಿದ, ದಲಿತ ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಅನುಕೂಲಗಳನ್ನು ಕಲ್ಪಿಸಿವೆ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸ್ವಾವಲಂಬಿ ಬದುಕಿಗೆ ಕೌಶಲ್ಯ ಜ್ಞಾನ ಕೊಡುವ ಮೂಲಕ ದೇಶದ ಸತ್ಪ್ರಜೆಗಳನ್ನಾಗಿಸಬೇಕು ಮತ್ತು ಆ ಮೂಲಕ ಹಿಂದುಳಿದ ಎಲ್ಲ ಸಮಾಜಗಳು ಮೇಲ್ಪಂಕ್ತಿಗೆ ಬರಬೇಕು ಎಂದರು.

ಹಿರಿಯರಾದ ಬಸಣ್ಣ ಬೆಟಗೇರಿ ಮಾತನಾಡಿ, ಗ್ರಾಮದ ಯುವಕರೆಲ್ಲರ ಸಂಘಟಿತ ಪರಿಶ್ರಮದ ಫಲವಾಗಿ ನಿರ್ಮಾಣವಾಗಿರುವ ದೇವಸ್ಥಾನ ಸಮಾಜಮುಖಿ ಕಾರ್ಯಗಳಿಗೆ ಬಳಕೆಯಾಗಲಿ. ಯುವಕರು ದುಶ್ಚಟಗಳಿಂದ ದೂರವಿದ್ದು ಸಂಸ್ಕಾರ, ಸಂಸ್ಕೃತಿ, ಗುರು-ಹಿರಿಯರಿಗೆ ವಿಧೇಯರಾಗಿ ನಡೆಯಬೇಕು ಎಂದರು.

ಈ ವೇಳೆ ಬಸಣ್ಣ ಬೆಟಗೇರಿ, ಶೇಖಣ್ಣ ಕಾಳೆ, ಚೆನ್ನವ್ವ ಮೈಲಾರಿ, ಸಿದ್ದಪ್ಪ ನೆನಗನಹಳ್ಳಿ, ವಿರೂಪಾಕ್ಷಪ್ಪ ಮರಳಿಹಳ್ಳಿ, ನೀಲಪ್ಪ ಮಾಯಕೊಂಡ, ಪಕ್ಕೀರಯ್ಯ ಹಿರೇಮಠ, ಬಸವರಾಜ ಗುಳಣ್ಣನವರ, ಹುವುಪ್ಪ ದೀಪಾವಳಿ, ದೇವಪ್ಪ ಬಡಿಗೇರ, ಜುಂಜಪ್ಪ ಮುದಿಯಮ್ಮನವರ, ದೇವಪ್ಪ ಮತ್ತೂರ, ನಾಗಯ್ಯ ಮಠಪತಿ, ಬಸವರಡ್ಡಿ ಹನುಮರಡ್ಡಿ, ಯಲ್ಲಪ್ಪ ಸುರಣಗಿ, ಮಂತೇಶ ಈರಗಾರ, ಮಾರುತಿ ಕೊಳಲ, ಮಲ್ಲಪ್ಪ ಪುಟ್ಟಮ್ಮನವರ, ನರೇದ್ರಪ್ಪ ಜಾಲವಡಗಿ, ಶಿವಪುತ್ರಪ್ಪ ಮಾಯಕೊಂಡ, ದುರಗಪ್ಪ ಹುಲ್ಲೂರ, ನಿಂಗಪ್ಪ ಸಾಂದ್ಲಿ, ಹನುಮಂತ ಸತ್ಯಮ್ಮನವರ, ಸಂಜೀವ ಸಾಲಿ, ಕರಿಯಪ್ಪ ಸಾಂದ್ಲಿ ಮುಂತಾದವರಿದದ್ದರು.

ಸಿದ್ದಲಿಂಗಸ್ವಾಮಿ ಪಶುಪತಿಮಠ, ಮಾರುತಿ ಸತ್ಯಮ್ಮನವರ ನಿರೂಪಿಸಿದರು.

ದೇವಸ್ಥಾನಗಳಲ್ಲಿ ನಿತ್ಯ ಭಜನೆ, ಆಚರಣೆಗಳು, ಸಾಂಪ್ರದಾಯಿಕ ಕಾರ್ಯಕ್ರಮಗಳು, ಕಲೆ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಾ ಬಂದಿವೆ. ದೇವಸ್ಥಾನಗಳು ನಮ್ಮ ಧರ್ಮ, ಸಂಸ್ಕೃತಿ, ನಂಬಿಕೆ, ಭಕ್ತಿಯ ಪ್ರತೀಕವಾಗಿದ್ದು, ದೇವಸ್ಥಾನ ನಿರ್ಮಿಸುವ ಜವಾಬ್ದಾರಿಯೊಂದಿಗೆ ಇಲ್ಲಿ ನಿತ್ಯನಿರಂತರ ಶ್ರೇಷ್ಠ ಕಾರ್ಯ, ಪೂಜೆ, ಪ್ರಾರ್ಥನೆ, ಪಾವಿತ್ರ್ಯತೆ ಕಾಪಾಡುವಂತಾಗಬೇಕು ಎಂದು ಬಸಣ್ಣ ಬೆಟಗೇರಿ ಹೇಳಿದರು.


Spread the love

LEAVE A REPLY

Please enter your comment!
Please enter your name here