ಶ್ರೀರಾಮ ಸೇನಾ ವತಿಯಿಂದ ರಕ್ತದಾನ ಶಿಬಿರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀರಾಮ ಸೇನಾ ತಾಲೂಕಾ ಘಟಕ ಹರ್ತಿ, ಗದಗ ಬ್ಲಡ್ ಡೋನರ್ಸ್ ಸೊಸೈಟಿ, ಜಿಮ್ಸ್ ರಕ್ತನಿಧಿ ಕೇಂದ್ರ ಹಾಗೂ ಶ್ರೀರಾಮ ಸೇನಾ ತಾಲೂಕ ಘಟಕ ಹರ್ತಿ ವತಿಯಿಂದ ಭಗತ್ ಸಿಂಣ್, ರಾಜಗುರು, ಸುಖದೇವರ ಬಲಿದಾನ ದಿನದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ಸೇನಾ ಗದಗ ಜಿಲ್ಲಾಧ್ಯಕ್ಷ ಸೋಮು ಗುಡಿ ವಹಿಸಿದ್ದರು. ತಾಲೂಕಾ ಘಟಕದ ಅಧ್ಯಕ್ಷ ಭರತ ಲದ್ದಿ ಹಾಗೂ ಗದಗ ಬ್ಲಡ್ ಡೋನರ್ಸ್ ಸೊಸೈಟಿ ಕಾರ್ಯದರ್ಶಿ ವಿಶ್ವನಾಥ ಎನ್.ರೋಖಡೆ ಅತಿಥಿಗಳಾಗಿ ಪಾಲ್ಗೊಂಡಿದ್ದರು.

Advertisement

ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ಸೋಮು ಗುಡಿ ಮಾತನಾಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರದಲ್ಲಿ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗುತ್ತಿರುವುದು ಹೆವ್ಮ್ಮೆಯ ಸಂಗತಿ ಎಂದರು.

ತಾಲೂಕು ಘಟಕದ ಅಧ್ಯಕ್ಷ ಭರತ ಲದ್ದಿ ಮಾತನಾಡಿ, ರಕ್ತದಾನ ಒಂದು ಜೀವವನ್ನು ಉಳಿಸುತ್ತದೆ. ಇಂತಹ ರಕ್ತದಾನ ಶಿಬಿರಗಳನ್ನು ಪ್ರತಿಯೊಂದು ಹಳ್ಳಿಗಳಲ್ಲಿ ಆಯೋಜಿಸಲಾಗುವುದು ಎಂದರು. ಈ ಸಂಧರ್ಭದಲ್ಲಿ ಹರ್ತಿ ಗ್ರಾಮದ ಮುಖಂಡರಾದ ರವಿಗೌಡ ಪಾಟೀಲ್, ಬಿ.ಟಿ. ಸೋಮರೆಡ್ಡಿ, ಜಿನಪ್ಪ ಪಟ್ಟಣ್ಣವರ, ಶಂಕ್ರಪ್ಪ ನವಲಿ, ಸೋಮರೆಡ್ಡಿ ರಡ್ಡೆರ, ನಿಂಗಪ್ಪ ಚಲವಾದಿ, ಬಸವರಾಜ ಕೊಟ್ಟಶೆಟ್ಟಿ, ಯಲ್ಲಪ್ಪ ತಿಪ್ಪಣ್ಣವರ, ಸಿದ್ದಪ್ಪ ಜೋಂಡಿ, ಚನ್ನಪ್ಪ ನಾವಳ್ಳಿ, ಫಕ್ಕೀರಯ್ಯಾ ಮರಿದೇವರಮಠ, ಬಸವರಾಜ ಯಳವತ್ತಿ, ಮಹೇಶ ಕಮ್ಮಾರ, ಗುಳಪ್ಪ ಗುಡದೂರ, ಹುಚ್ಚಪ್ಪ ಆರೇರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here