ವಿಜಯಸಾಕ್ಷಿ ಸುದ್ದಿ, ತುಮಕೂರು
ನಗರದಲ್ಲಿ ಗುರುವಾರ ಸಂಜೆ ಪಿಂಜಾರ್ ಸಮಾಜದ ಅಧ್ಯಕ್ಷ ಬಶೀರ್ ಅಹಮ್ಮದ್ ರಂಜಾನ್ ಕಿಟ್ ವಿತರಣೆ ಮಾಡಿದರು.
ಉಮರ್ ಫಾರೂಕ್ ಅಧ್ಯಕ್ಷರು ಹೋಮ್ ವೆಲ್ ಫೌಂಡೇಶನ್ ತುಮಕೂರ್ ಇವರು ಕೊಡಮಾಡಿದ ಕಿಟ್ನ್ನು ಆರ್ಥಿಕವಾಗಿ ಹಿಂದುಳಿದ ಪಿಂಜಾರ್ ಸಮುದಾಯದ ಕುಟುಂಬಕ್ಕೆ ವಿತರಿಸಿದರು.
ಪಿಂಜಾರ್ ಸಮುದಾಯದ ಅಧ್ಯಕ್ಷ ಬಶೀರ್ ಅಹಮ್ಮದ್ ಮಾತನಾಡಿ, ಪವಿತ್ರ ರಂಜಾನ್ ಹಬ್ಬವನ್ನು ಕೊರೋನಾ ಸಮಯದಲ್ಲಿಯೂ ಎಲ್ಲರು ಸಮಾನ ಭಾವದಿಂದ ಆಚರಿಸಬೇಕೆಂಬ ಉದ್ದೇಶದಿಂದ ಕಿಟ್ ವಿತರಿಸಲಾಯಿತು ಎಂದರು.

ಕಿಟ್ನಲ್ಲಿ ಅಕ್ಕಿ, ಎಣ್ಣೆ ಮತ್ತಿತರ ದಿನನಿತ್ಯ ಉಪಯೋಗಿಸಬಹುದಾದ ವಸ್ತುವಿದೆ. ಇದನ್ನು ದಾನವಾಗಿ ನೀಡುವ ಮೂಲಕ ಅಧ್ಯಕ್ಷರು ಹೋಮ್ ವೆಲ್ ಫೌಂಡೇಶನ್ ತುಮಕೂರ ಇವರು ಮಾನವೀಯತೆ ಮೆರೆದಿದ್ದಾರೆ ಎಂದು ಪಿಂಜಾರ್ ಸಮುದಾಯದ ಅಧ್ಯಕ್ಷ ಬಶೀರ್ ಅಹಮ್ಮದ್ ಹೇಳಿದರು.
ಈ ಸಮಯದಲ್ಲಿ ಅಹಮ್ಮದ್ ಭಾಷ್, ಮಲ್ಲಿಕ್ ಸಾಬ್, ಶಬ್ಬೀರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.