ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಶ್ರೀ ಡಾ. ಪಂಡಿತ್ ಪುಟ್ಟರಾಜ ಸಂಘ ಸಂಸ್ಥಾಪಕ ಅಧ್ಯಕ್ಷರಾದ ಎಂ.ಪಿ. ಮುಳುಗುಂದ ನೇತೃತ್ವದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಜಂತ್ಲಿ-ಶಿರೂರು ಗ್ರಾಮ ಘಟಕ ಅಧ್ಯಕ್ಷರಾಗಿ ಮಂಜು ದೋಣಿ, ಉಪಾಧ್ಯಕ್ಷರಾಗಿ ಫಕೀರಪ್ಪ ಮುರುಡಿ, ಹರ್ಲಾಪುರ ಗ್ರಾಮ ಯುವ ಘಟಕ ಅಧ್ಯಕ್ಷರಾಗಿ ಮಹಾಲಿಂಗಪ್ಪ ಮ್ಯಾಗೇರಿ, ಯುವ ಘಟಕ ಕಾರ್ಯದರ್ಶಿಯಾಗಿ ಬಸವರಾಜ್ ನೀರಲಗಿ, ಗ್ರಾಮ ಯುವ ಘಟಕದ ಸದಸ್ಯರಾಗಿ ಕೊಟ್ರೇಶ್ ಗೌಡಪ್ಪನವರ್ ಇವರಿಗೆ ಆದೇಶಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಯುವ ಘಟಕ ಅಧ್ಯಕ್ಷರಾದ ಸಿರಾಜ್ ಲಕ್ಕುಂಡಿ, ಗದಗ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಮುಧೋಳಮಠ, ಗದಗ ತಾಲೂಕು ಸಹ ಕಾರ್ಯದರ್ಶಿ ಶಂಭುಲಿAಗೇಶ ಗಾಣಿಗೇರ್, ಎಸ್ಸಿ ಘಟಕ ಮಹಿಳಾ ಜಿಲ್ಲಾಧ್ಯಕ್ಷರಾದ ರೇಖಾ ಹುಲ್ಲೂರ್, ಅಸುಂಡಿ ಗ್ರಾಮ ಘಟಕದ ಮಹಿಳಾ ಅಧ್ಯಕ್ಷರಾದ ಕವಿತಾ ಗುಡೂರ್, ಅಲ್ಪಸಂಖ್ಯಾತ ಘಟಕ ತಾಲೂಕ ಅಧ್ಯಕ್ಷರಾದ ಸೋಫಿಯಾ ನದಾಫ್ ಪಾಲ್ಗೊಂಡಿದ್ದರು.