ನಾನು ದೇಶದ ಬಗ್ಗೆ, ಸೈನಿಕರ ಬಗ್ಗೆ ಅಥವಾ ಪ್ರಧಾ‌ನಿಗಳ ಬಗ್ಗೆ ಹಗುರವಾಗಿ ಮಾತನಾಡಿಲ್ಲ: ಕೊತ್ತೂರು ಮಂಜುನಾಥ್

0
Spread the love

ಕೋಲಾರ: ಆಪರೇಷನ್ ಸಿಂದೂರ್ ವಿಚಾರವಾಗಿ ನನಗೆ ಯಾವುದೇ ಅನುಮಾನವಿಲ್ಲ. ಕಾರ್ಯಾಚರಣೆ ಸಮಾಧಾನ ತಂದಿಲ್ಲ ಎಂದು ಹೇಳಿದ್ದೇನೆ ಎಂದು ಕಾಂಗ್ರೆಸ್​​ ಶಾಸಕ ಕೊತ್ತೂರು ಮಂಜುನಾಥ್ ಯುಟರ್ನ್​ ಹೊಡೆದಿದ್ದಾರೆ. ತಮ್ಮ ಹೇಳಿಕೆಗೆ ಆಕ್ಷೇಪಗಳು ವ್ಯಕ್ತವಾಗುತ್ತಿದ್ದಂತೆಯೇ ಪ್ರತಿಕ್ರಿಯೇ ನೀಡಿದ ಅವರು,

Advertisement

ಆಪರೇಷನ್ ಸಿಂದೂರ್ ವಿಚಾರವಾಗಿ ನನಗೆ ಯಾವುದೇ ಅನುಮಾನವಿಲ್ಲ. ಕಾರ್ಯಾಚರಣೆ ಸಮಾಧಾನ ತಂದಿಲ್ಲ ಎಂದು ಹೇಳಿದ್ದೇನೆ. ಮೊದಲು ಪೆಹಲ್ಗಾಮ್ ನಲ್ಲಿ 26 ಜನರನ್ನು ಕೊಲೆ ಮಾಡಿದ ಉಗ್ರರನ್ನು ಮೊದಲು ಸದೆಬಡಿಯಬೇಕಿತ್ತು. ನಂತರ ಪಾಕಿಸ್ಥಾನ ಕುಮ್ಮಕ್ಕು ಕೊಟ್ಟಿದ್ದ ಉಗ್ರವಾದಿಗಳ ನೆಲೆಗಳನ್ನು ಹೊಡೆದು ಸರ್ವನಾಶ ಮಾಡಬೇಕಿತ್ತು. ನಾನು ದೇಶದ ಬಗ್ಗೆ, ಸೈನಿಕರ ಬಗ್ಗೆ ಅಥವಾ ಪ್ರಧಾ‌ನಿಗಳ ಬಗ್ಗೆ ಹಗುರವಾಗಿ ಮಾತನಾಡಿಲ್ಲ ಎಂದು ಹೇಳಿದರು.

ಉಗ್ರರ ನೆನೆಗಳನ್ನು ಹೊಡೆದುಹಾಕಿ ಉಗ್ರರನ್ನು ಕೊಂದು ಹಾಕಿದ ಬಗ್ಗೆ ಹೇಳಿದ್ದನ್ನು ಕೇಳಿದ್ದೆ. ಅದರ ಬಗ್ಗೆ ಸರಿಯಾದ ಮಾಹಿತಿ ಕೊಟ್ಟಿಲ್ಲ. ಜನರು ನನ್ನ ಬಳಿ ಹೇಳಿಕೊಂಡ ಕೆಲವೊಂದು ವಿಚಾರಗಳನ್ನು ನಾನು ಹೇಳಿದ್ದೇನೆ. ದೇಶದ ಸಮಾನ್ಯ ಪ್ರಜೆಯಾಗಿ ನಾನು ಕೇಳಿದ್ದೇನೆ. ಈಗಲೂ‌ ಮೊದಲು ಪೆಹಲ್ಗಾಮ್ ದಾಳಿಕೊರರನ್ನು ಮೊದಲು ಸದೆಬಡೆಯಬೇಕು ಎಂದರು.

 


Spread the love

LEAVE A REPLY

Please enter your comment!
Please enter your name here