ಗದಗ: ಗದಗ ನಗರದ ಝೇಂಡಾ ವೃತ್ತದ ಹತ್ತಿರವಿರುವ ಭಾರತೀಯ ರೈಲ್ವೆ ಹಳಿ ದಾಟಲು ನಿರ್ಮಾಣ ಮಾಡಿದ, ಗದಗ-ಬೆಟಗೇರಿ ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುತ್ತಿರುವ ಮೇಲ್ಸೇತುವೆಯ ಕೆಳ ಭಾಗದಲ್ಲಿರುವ ರೈಲ್ವೆ ಇಲಾಖೆಯ ಹೈಟೆನ್ಶನ್ ವಿದ್ಯುತ್ ತಂತಿಗಳಿಂದ ಸಾರ್ವಜನಿಕರ ತೊಂದರೆಯಾಗದಿರಲು ಹಾಗೂ ಸುರಕ್ಷತೆಗಾಗಿ ಅಳವಡಿಸಿದ ಸುರಕ್ಷಾ ಕವಚಗಳು ಕೆಳಗೆ ಬಿದ್ದಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಪಘಾತ ಸಂಭವಿಸುವ ಮುನ್ನ ಸುರಕ್ಷಾ ಕವಚವನ್ನು ಸರಿಪಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಶೀರಿ ವಿನಂತಿಸಿದ್ದಾರೆ.
Advertisement