ಕಾಲ್ತುಳಿತಕ್ಕೆ ಬಲಿ ಪ್ರಕರಣ: ಹೆಣದ ಮೇಲೆ ನಾನು ರಾಜಕೀಯ ಮಾಡಲ್ಲ – ಡಿ.ಕೆ. ಶಿವಕುಮಾರ್ ಕಣ್ಣೀರು

0
Spread the love

ಬೆಂಗಳೂರು: ಆರ್​’ಸಿಬಿ ಗೆಲುವಿನ ಸಂಭ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ, ಡಿಸಿಎಂ ಡಿ.ಕೆ. ಶಿವಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ನಂತರ ಘಟನೆ ಕುರಿತು ಮಾತನಾಡಿದ ಡಿಕೆಶಿ,

Advertisement

ಸಿಎಂ, ಗೃಹಸಚಿವರು ಎಲ್ಲರೂ ಶಾಕ್‌ನಲ್ಲಿದ್ದಾರೆ. ಈ ಘಟನೆಗೆ ನಾನು ಯಾರನ್ನೂ ದೂಷಿಸಲ್ಲ. 11 ಕುಟುಂಬ ಅವರ ಮಕ್ಕಳನ್ನು ಕಳೆದುಕೊಂಡಿದ್ದಾರೆ. ನನ್ನ ಕುಟುಂಬದವರನ್ನೇ ಕಳೆದುಕೊಂಡಷ್ಟು ನೋವಾಗ್ತಿದೆ.

ಹೆಣದ ಮೇಲೆ ನಾನು ರಾಜಕೀಯ ಮಾಡಲ್ಲ ಎಂದು ಕಣ್ಣಿರಿಟ್ಟಿದ್ದಾರೆ.  ಇನ್ನೂ ಪೊಲೀಸ್ ಇಲಾಖೆ ಕೂಡಲೇ ಜನರನ್ನು ತಡೆಯಿರಿ ಅಂತ ಹೇಳಿತ್ತು. ನಾನೂ ಕೂಡಲೇ ಮ್ಯಾನೇಜ್ಮೆಂಟ್‌ಗೆ ಹೇಳಿದೆ. ಆದರೂ, ಅಲ್ಲಿ ಹೋಗೋದಕ್ಕೂ ಕೂಡ ಜಾಗ ಇರಲಿಲ್ಲ. ಕೂಡಲೇ ಅವರನ್ನ ನಾನು ನನ್ನ ಕಾರ್‌ನಲ್ಲಿ ಕೂರಿಸಿಕೊಂಡು ಹೋದೆ ಎಂದು ಹೇಳಿದ್ದಾರೆ.

ಯಾರು ಏನೇ ಹೇಳಿದರೂ, ಟೀಕೆ ಮಾಡಲಿ. ಸದನದಲ್ಲಿ ಎಲ್ಲವೂ ಹೊರಬರಲಿದೆ. ಅವರವರ ಕಾಲದಲ್ಲಿ ಏನಾಯ್ತು ಅಂತ ಗೊತ್ತಿದೆ. ರಾಜ್‌ಕುಮಾರ್ ಸತ್ತಾಗ ಏನಾಯ್ತು ಅಂತ ಗೊತ್ತಿದೆ, ನಾನು ಆಗ ದೆಹಲಿಯಲ್ಲಿದ್ದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here