ಬೆಂಗಳೂರು: ಕೇವಲ ನಿಮ್ಮ ಪ್ರಚಾರದ ಹುಚ್ಚಿಗಾಗಿ 11 ಮಕ್ಕಳು ಬಲಿಯಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಗೇಟ್ ಮಾತ್ರ ತೆಗೆದಿದ್ದು, ಜನರು ಸೇರಿದಾಗ ಯಾಕೇ ಗೇಟ್ ಗಳನ್ನು ಓಪನ್ ಮಾಡಿಲ್ಲ. ಮಾತು ಎತ್ತಿದ್ರೆ ಪ್ರಯಾಗ್ ನಲ್ಲಿ ಕಾಲು ತುಳಿದ ಆಗಿಲ್ವಾ ಅಂತೀರಿ,
66 ಕೋಟಿಗೂ ಹೆಚ್ಚು ಜನ ಪ್ರಯಾಗ್ ನಲ್ಲಿ ಬಂದಿದ್ದಾರೆ. ಆದರೆ ನಿಮಗೆ ಕೇವಲ ಎರಡು ಲಕ್ಷ ಜನರ ನಿಯಂತ್ರಣ ಮಾಡೋಕೆ ಆಗಿಲ್ಲ. ಕೇವಲ ನಿಮ್ಮ ಪ್ರಚಾರದ ಹುಚ್ಚಿಗಾಗಿ ಕರ್ನಾಟಕದ 11 ಮಕ್ಕಳು ಬಲಿಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಕಾಂಗ್ರೆಸ್ ಸರ್ಕಾರದವರು ಆರ್ಸಿಬಿ ಸೆಲೆಬ್ರೇಷನ್ ಅನ್ನು ಹೆಣದ ಮೇಲೆ ಮಾಡಿದ್ದಾರೆ. ಒಬ್ಬ ಜವಾಬ್ದಾರಿಯುತ ಸರ್ಕಾರ ಈ ರೀತಿ ನಡೆದುಕೊಳ್ಳುತ್ತಾ ಎಂದು ಕೇಂದ್ರ ಸಚಿವೆ ಪ್ರಶ್ನೆ ಮಾಡಿದ್ರು. ನಮ್ಮ ಪೊಲೀಸರನ ಮಧ್ಯರಾತ್ರಿ ವರೆಗೂ ಕೆಲಸ ಮಾಡಿದ್ದಾರೆ. ನೀವು ಅನುಮತಿ ಕೊಟ್ಟಿಲ್ಲ ಅಂದ್ರೂ ಹೇಗೆ ಎರಡು ಸೆಲೆಬ್ರೇಷನ್ ಆಯ್ತು? ಪೊಲೀಸರನ್ನು ಯಾಕೆ ಸಸ್ಪೆಂಡ್ ಮಾಡಿದ್ರಿ? ಎಂದು ಪ್ರಶ್ನೆ ಮಾಡಿದ್ರು.