ಮಹಾರಾಷ್ಟ್ರ: ಮಹಾರಾಷ್ಟ್ರದ ಖ್ಯಾತ ಲೇಖಕ, ಮಹಾನ್ ವಿದ್ವಾಂಸರಾದ ದಾಜಿ ಪನ್ಶಿಕರ್ (92) ಅವರು ವಿಧಿವಶರಾಗಿದ್ದಾರೆ. ಮಹಾಭಾರತ ಏಕ ಸುಧಾಚ ಪ್ರವಾಸ, ಕರ್ಣ ಖರ ಕೂಂ ತೋಟಾ?, ಕಥಾಮೃತಂ, ಕನಿಕಾನೀತಿ,
Advertisement
ಶಂಕರಾಚಾರ್ಯರ ಸ್ತೋತ್ರ ಗಂಗೆಯ ಎರಡು ಭಾಗಗಳು, ಅಪರಿಚಿತ ರಾಮಾಯಣದ ಐದು ಭಾಗಗಳು, ಗಾನ ಸರಸ್ವತಿ ಕಿಶೋರಿ ಅಮೋಂಕರ್ – ಆದಿ ಶಕ್ತಿಚ ಧನ್ಯೋದ್ಗರ್ ಸೇರಿದಂತೆ ದಾಜಿ ಅವರು ಪ್ರಸಿದ್ಧ ಕೃತಿಗಳನ್ನು ರಚಿಸಿದ್ದಾರೆ.
ದಾಜಿ ಅವರು ತಮ್ಮ ಹಿರಿಯ ಸಹೋದರ ಪ್ರಭಾಕರ್ ಪನ್ಶಿಕರ್ ಅವರ ‘ನಾಟ್ಯಸಂಪದ‘ ಎಂಬ ನಾಟ್ಯ ಸಂಸ್ಥೆಯ ವ್ಯವಸ್ಥಾಪಕರಾಗಿದ್ದಾಗ ಸಾಹಿತ್ಯ,
ಸಂಗೀತ, ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿನ ಮರಾಠಿ ಅನುಭವಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಮಹಾನ್ ವಿದ್ವಾಂಸ ದಾಜಿ ಪನ್ಶಿಕರ್ ನಿಧನಕ್ಕೆ ಮಹಾರಾಷ್ಟ್ರ ಸಿಎಂ ದೇವೇಂಡ್ರ ಫಡ್ನಾವೀಸ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.