ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸದ್ಯ ಪರಭಾಷೆಯಲ್ಲೂ ಸಖತ್ ಮಿಂಚುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ನಟಿ ಇದೀಗ ಚೆನ್ನೈ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನನ್ನ ಹೃಯದಲ್ಲಿ ಚೆನ್ನೈಗೆ ವಿಶೇಷ ಸ್ಥಾನ ಇದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಸದ್ಯ ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು ಆ ಫೋಟೋದಲ್ಲಿ ನಟ ನಾಗಾರ್ಜುನ ಕಾಲ ಬಳಿ ರಶ್ಮಿಕಾ ಕುಳಿತು ಏನನ್ನೂ ಚರ್ಚೆ ಮಾಡುತ್ತಿದ್ದಾರೆ. ಚೆನ್ನೈನಲ್ಲಿ ನಡೆದ ಗ್ರ್ಯಾಂಡ್ ಈವೆಂಟ್ ವೇಳೆ ತೆಗೆದ ಫೋಟೋ ಇದಾಗಿದೆ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.. ನಾಗಾರ್ಜುನ ಅವರು ರಶ್ಮಿಕಾ ಕೈ ಹಿಡಿದ್ದು ಈ ಫೋಟೋಗೆ ರಶ್ಮಿಕಾ ವಿಶೇಷ ಕ್ಯಾಪ್ಶನ್ ನೀಡಿದ್ದಾರೆ.
‘ನಾವು ಕುಬೇರ ಚಿತ್ರದ ಪ್ರಮೋಷನ್ನ ಚೆನ್ನೈನಲ್ಲಿ ಆರಂಭಿಸಿದ್ದೇವೆ. ನನ್ನ ಬಾಲ್ಯ ಇಲ್ಲಿ ಕಳೆದ ಕಾರಣಕ್ಕೆ ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ. ನನಗೆ ಖುಷಿ ಇದೆ. ನಾನು ಈವೇಂಟ್ ದಿನ ಸಾಕಷ್ಟು ನಕ್ಕಿದ್ದೇನೆ’ ಎಂದಿದ್ದಾರೆ.
ಅಂದ ಹಾಗೆ ರಶ್ಮಿಕಾ ತಮ್ಮ ಬಾಲ್ಯದ ದಿನಗಳನ್ನು ಚೈನ್ನೈನಲ್ಲಿ ಕಳೆದಿದ್ದರು. ಚೆನ್ನೈನ ರಸ್ಕಿನ್ ಹೆಸರಿನ ಶಾಲೆಯಲ್ಲಿ ಓದಿದ್ದರು. ಆ ಬಳಿಕ ರಶ್ಮಿಕಾ ತಂದೆ ಕೊಡಗಿಗೆ ಸ್ಥಳಾಂತರಗೊಂಡರು. ಹಾಗಾಗಿ ರಶ್ಮಿಕಾ ಮೊದಲು ತಮಿಳು ಭಾಷೆಯನ್ನು ಕಲಿತಿದ್ದರು ಎಂಬುದನ್ನು ರಶ್ಮಿಕಾ ಈ ಹಿಂದೆ ಹೇಳಿಕೊಂಡಿದ್ದರು. ಇದೀಗ ರಶ್ಮಿಕಾ ಚೆನ್ನೈನ ಹೊಗಳಿರುವುದಕ್ಕೆ ಕನ್ನಡಿಗರು ಅಸಮಾಧಾನಗೊಂಡಿದ್ದು ರಶ್ಮಿಕಾ ಹೇಳಿಕೆಯನ್ನು ಟೀಕಿಸಿದ್ದಾರೆ.