ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು

0
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ: ಶೈಕ್ಷಣಿಕ, ಸಾಮಾಜಿಕ, ವಿವಿಧ ಅಭಿವೃದ್ಧಿಗಳಿಗೆ ಕೈಗೊಳ್ಳುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

Advertisement

ಹೊಂಬಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

2024-25ನೇ ಸಾಲಿನ ಹೊಂಬಳ ಗ್ರಾಮದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನಿರ್ಮಾಣ ಕಾಮಗಾರಿ, ಹೊಂಬಳ ಗ್ರಾಮದ 5ನೇ ವಾರ್ಡಿನ ರಘು ಬಸಪ್ಪ ಹುಣಸಿಮರದ ಇವರ ಮನೆಯಿಂದ ಬಸವರಾಜ ಹುಣಸಿಮರದ ಇವರ ಮನೆಯವರೆಗೆ ಸಿ.ಸಿ ಗಟಾರ ಸಿ.ಡಿ ನಿರ್ಮಾಣ ಕಾಮಗಾರಿ, ಹೊಂಬಳ ಗ್ರಾಮದ ಶ್ರೀ ಹೊನ್ನಕೇರಿ ಮಲ್ಲಯ್ಯ ಸಮುದಾಯ ಭವನ ನಿರ್ಮಾಣ, ಹೊಂಬಳ ಗ್ರಾಮದ ಹರಣಸಿಕಾರಿ ಜನಾಂಗದ ಸಮುದಾಯ ಭವನ ನಿರ್ಮಾಣ ಸೇರಿದಂತೆ ಅಂದಾಜು 418 ಲಕ್ಷ ರೂ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಅಂದಾಜು 25.30 ಲಕ್ಷ ರೂ ವೆಚ್ಚದ ಹೊಂಬಳ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ 4 ಕೊಠಡಿಗಳ ಉದ್ಘಾಟನೆ, ಅಂದಾಜು 13.90 ಲಕ್ಷ ರೂ. ವೆಚ್ಚದ ಹೊಂಬಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಎಂ.ಕೆ.ಬಿ.ಎಸ್. ಶಾಲೆಯ 1 ಕೊಠಡಿ, 13.90 ಲಕ್ಷ ರೂ. ವೆಚ್ಚದಡಿ ಹೊಂಬಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ 1 ಕೊಠಡಿಗಳ ಉದ್ಘಾಟನೆಯನ್ನು ಶಾಸಕರು ನೆರವೇರಿಸಿದರು.

ಈ ಸಂದರ್ಭದಲ್ಲಿ ಹೊಂಬಳ ಗ್ರಾ.ಪಂ ಅಧ್ಯಕ್ಷೆ ದಾವನಬಿ ಮುಲ್ಲಾನವರ, ಉಪಾಧ್ಯಕ್ಷರಾದ ನೀಲಮ್ಮ ಬಾಳಮ್ಮನವರ, ಬಸವರಾಜ ಹುಣಸಿಮರದ, ಶಾಲಾ ಶಿಕ್ಷಣ ಇಲಾಖೆಯ ಆರ್.ಎಸ್. ಬುರಡಿ, ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ ತುಂಬರಮಟ್ಟಿ, ಹಿಂದುಳಿದ ವರ್ಗಗಳ ತಾಲೂಕಾ ಅಧಿಕಾರಿ ಬಸವರಾಜ ಬಳ್ಳಾರಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಲ್ಲಯ್ಯ ಕೊರನವರ, ಬಿ.ಇ.ಓ ವಿ.ವಿ. ನಡುವಿನಮನಿ ಮುಂತಾದವರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here