ಎರಡು ವರ್ಷಗಳಲ್ಲಿ ಹಗರಣಗಳೇ ಈ ಸರ್ಕಾರದ ಸಾಧನೆ: ಕುಮಾರ್ ಬಂಗಾರಪ್ಪ ಕಿಡಿ

0
Spread the love

ಬೆಂಗಳೂರು: ಎರಡು ವರ್ಷಗಳಲ್ಲಿ ಹಗರಣಗಳೇ ಈ ಸರ್ಕಾರದ ಸಾಧನೆ ಎಂದು ಬಿಜೆಪಿ ನಾಯಕ ‌ಕುಮಾರ್ ಬಂಗಾರಪ್ಪ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಎರಡು ಪ್ರಕರಣದಲ್ಲಿ ಸರ್ಕಾರ ಹೇಗೆ ದಾರಿ ತಪ್ಪಿದೆ ಎಂದು ಗೊತ್ತಾಗ್ತಿದೆ.

Advertisement

ಅಭಿವೃದ್ಧಿ ಕೆಲಸ ಆಗ್ತಿಲ್ಲ. ಕ್ಷೇತ್ರಕ್ಕೂ ಅನುದಾನ ಸಿಗ್ತಿಲ್ಲ. ಶಿಕ್ಷಣ ಇಲಾಖೆ ಎಲ್ಲೋ ಹೋಗಿದೆ. ಮಕ್ಕಳು ಓದಿ ಅಂಕ ಪಡೆದರು ಸಚಿವರು ನಮ್ಮ ಸಾಧನೆ ಎಂದು ಹೇಳಿಕೊಳ್ತಾರೆ. ಸರ್ಕಾರದ ಯಾವ ಇಲಾಖೆಯೂ ಸರಿಯಾಗಿ ಕೆಲಸ ಆಗಿಲ್ಲ. ಎರಡು ವರ್ಷಗಳಲ್ಲಿ ಹಗರಣಗಳೇ ಈ ಸರ್ಕಾರದ ಸಾಧನೆ ಎಂದು ಕಿಡಿಕಾರಿದ್ದಾರೆ.

ಈ‌ ಸರ್ಕಾರ ರಾಜ್ಯವನ್ನು ಏಳಿಗೆ ಕಡೆಗೆ ತೆಗೆದುಕೊಂಡು ಹೋಗುವುದಿಲ್ಲ. ಸಂತೋಷದ ವಿಷಯ ಎಂದರೆ ರಾಜ್ಯದ ಡ್ಯಾಂಗಳು ತುಂಬುತ್ತಿವೆ. ಡ್ಯಾಂ ತುಂಬಿದ್ರು ರೈತರು ಸಂಕಷ್ಟದಲ್ಲಿ ಇದ್ದಾರೆ. ಮಾವು ಬೆಳೆ ನಷ್ಟ ಆಗಿದೆ. ರೈತನ ಪರ ಸರ್ಕಾರ ನಿಲ್ಲಬೇಕು ಅಂತ ಒತ್ತಾಯಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here