ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್ ಆಡಳಿತದಲ್ಲಿ ನಡೆದ ಭ್ರಷ್ಟಾಚಾರ ಹಾಗೂ ಹಗರಣಗಳನ್ನು ತನಿಖೆಗೊಳಪಡಿಸುವಂತೆ ಅವರದೇ ಪಕ್ಷದ ಸದಸ್ಯರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದು ಇದರಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ, ರಾಜ್ಯಪಾಲರು ಎಲ್ಲ ಇಲಾಖೆಗಳ ಸಮಗ್ರ ಮಾಹಿತಿ ಪಡೆದುಕೊಂಡು ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರವನ್ನು ತನಿಖೆಗೆ ಒಳಪಡಿಸಬೇಕೆಂದು ಗದಗ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷ ಎಂ.ವೈ. ಮುಧೋಳ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಎಚ್.ಕೊಪ್ಪಳ, ಪಕ್ಷದ ರಾಜ್ಯ ಮುಖಂಡರಾದ ಈರಣ್ಣ ಬಾಳಿಕಾಯಿ, ವೀರಭದ್ರೇಶ ಅಕ್ಕಿ, ಉಪಾಧ್ಯಕ್ಷ ಗಿರೀಶ್ ಸಂಶಿ, ಹಿರಿಯರಾದ ಎಂ.ಎಸ್. ಪರ್ವತಗೌಡ್ರ, ಸಂಗಪ್ಪ ಎಲಬುಣಿಸಿ, ಜಿಲ್ಲಾ ಪದಾಧಿಕಾರಿಗಳು, ತಿಪ್ಪಣ್ಣ ಹುಡೇದ, ದೇವಪ್ಪ ಮಲ್ಲಸಮುದ್ರ, ಲಕ್ಷ್ಮಣ ನಾಯಕ, ಶಿರಾಜ್ ಕದಡಿ, ರಾಜೇಸಾಬ ತಹಸೀಲ್ದಾರ, ಬಾದಶಾ ಭಗವಾನ, ಮೆಹಬೂಬಸಾಬ ಹುಲ್ಲೂರ, ಇಮಾಮ ಹುಸೇನ ಉಮಚಗಿ, ಶ್ರೀನಿವಾಸ್ ಓಂಕಾರ ಮುಂತಾದವರು ಉಪಸ್ಥಿತರಿದ್ದರು.