ಕೊಡಗು:– ವಿದ್ಯುತ್ ಸ್ಪರ್ಶಿಸಿ ಹಸುವೊಂದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ಓಂ ಶಾಂತಿ ಆಶ್ರಮದ ಉದ್ಯಾನದ ಬಳಿ ಜರುಗಿದೆ.
Advertisement
ವಿದ್ಯುತ್ ಸಂಪರ್ಕದ ಟಿಸಿ ಇರುವ ಜೋಡಿ ಕಂಬದ ಬಳಿ ನೆಲದಲ್ಲಿ ಅಳವಡಿಸಿರುವ ಕೇಬಲ್ ತುಂಡರಿಸಿ ಹಸುವಿನ ಕಾಲಿಗೆ ವಿದ್ಯುತ್ ಪ್ರವಹಿಸಿದೆ. ಈ ವೇಳೆ ದುರಂತ ಸಂಭವಿಸಿದೆ.
ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಕ್ಕಳು ಹೆಚ್ಚಾಗಿ ಆಟವಾಡುವ ಸ್ಥಳ ಇದಾಗಿದೆ. ಶಾಲೆಗಳಿಗೆ ರಜೆ ಬೇರೆ ಇರೋದ್ರಿಂದ ಮಕ್ಕಳು ಅತಿಹೆಚ್ಚು ಸೇರುವ ಸಾಧ್ಯತೆಗಳಿಗೆ ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.