ವಿಜಯಸಾಕ್ಷಿ ಸುದ್ದಿ, ಗದಗ: ರೋಟರಿ ಗದಗ ಸೆಂಟ್ರಲ್ ವತಿಯಿಂದ 2025-26ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭವು ಸೇವಾಲಾಲ ನಗರದ ರೋಟರಿ ಭವನದಲ್ಲಿ ಜರುಗಿತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಪರಮಪೂಜ್ಯ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ವಹಿಸಿದ್ದರು. ಡಿಆರ್ಎಫ್ಸಿ ಪಿಡಿಜಿ ರೊ. ಗಣೇಶ ಭಟ್ ನೂತನ ಪದಾಧಿಕಾರಿಗಳಿಗೆ ಸೇವಾದೀಕ್ಷೆ ನೆರವೇರಿಸಿದರು. ಅಸಿಸ್ಟಂಟ್ ಗವರ್ನರ್ ರೊ. ವಿ.ಕೆ. ಗುರುಮಠ ಮಾತನಾಡಿದರು.
ಅಧ್ಯಕ್ಷ-ರೊ. ಚೇತನ ಅಂಗಡಿ, ಕಾರ್ಯದರ್ಶಿ-ರೊ. ರಾಜು ಉಮನಾಬಾದಿ, ಖಜಾಂಚಿ ರೊ. ಡಾ.ಪ್ರಭು ಗಂಜಿಹಾಳ, ಉಪಾಧ್ಯಕ್ಷ- ರೊ. ಟಿ.ಎಸ್. ಪಾಟೀಲ, ಐಪಿಪಿ ರೊ. ಆರ್.ಬಿ. ದಾನಪ್ಪಗೌಡರ, ಪ್ರೆಸಿಡೆಂಟ್ ಎಲೆಟ್ ರೊ. ಮಧುಸೂಧನ ಪುಣೇಕರ, ಸಾರ್ಜಂಟ್ ಅಟ್ ಆರ್ಮ್ಸ ರೊ. ಈಶಣ್ಣ ಗದ್ದಿಕೇರಿ ಸೇವಾದೀಕ್ಷೆ ಸ್ವೀಕರಿಸಿದರು.
ನಿರ್ದೇಶಕ ಮಂಡಳಿಯಲ್ಲಿ -ಕ್ಲಬ್ ಸೇವೆ ರೊ. ಪ್ರಕಾಶ ಉಗಲಾಟದ, ವೃತ್ತಿಪರ ಸೇವೆ ರೊ. ಮಂಜುನಾಥ ಬೇಲೇರಿ, ಸಮುದಾಯ ಸೇವೆ ರೊ. ಮುರುಗೇಶ ಬಡ್ನಿ, ಅಂತಾರಾಷ್ಟ್ರೀಯ ಸೇವೆ ರೊ. ಮಲ್ಲಿಕಾರ್ಜುನ ಐಲಿ, ಯುವಸೇವೆ ರೊ. ರಾಜು ಕಂಟಿಗೊಣ್ಣನವರ, ಸ್ಥಾಯಿ ಸಮಿತಿಯಲ್ಲಿ-ಆಡಳಿತ ರೊ. ಡಾ. ಸಿ.ಬಿ. ಹಿರೇಗೌಡ್ರ, ಸೇವಾಯೋಜನೆ ರೊ. ಎಸ್.ಆಯ್. ಅಣ್ಣಿಗೇರಿ, ಸದಸ್ಯತ್ವ ರೊ. ಎಸ್.ಸಿ. ಲಕ್ಕುಂಡಿ, ಪಿಆರ್ಓ ಮತ್ತು ಬುಲೆಟಿನ್ ರೊ. ಹೆಚ್.ವಿ. ಶೆಟ್ಟಿ, ಕ್ಲಬ್ ತರಬೇತುದಾರರು ರೊ. ಡಾ. ವಿ.ಸಿ. ಶಿರೋಳ, ರೋಟರಿ ಫೌಂಡೇಶನ್ ರೊ. ಶರಣಬಸಪ್ಪ ಗುಡಿಮನಿ, ಪೋಲಿಯೊ ಪಲ್ಸ್ ರೊ. ಸಂತೋಷ ತೋಟಗಂಟಿಮಠ, ಆರ್ಸಿಸಿ/ಐಸಿಸಿ ರೊ. ಸಿ.ಜಿ. ಹಿರೇಗೌಡ್ರ, ಕ್ಲಬ್ ಇತಿಹಾಸಕಾರ ರೊ. ಮಲ್ಲಿಕಾರ್ಜುನ ಚಂದಪ್ಪನವರ, ಸೋಶಿಯಲ್ ಮತ್ತು ಕಲ್ಚರಲ್ ರೊ. ವಿಜಯಕುಮಾರ ಹಿರೇಮಠ, ಸ್ಪೋರ್ಟ್ಸ್ ಕಮಿಟಿ ರೊ. ರಾಜು ಕುರುಡಗಿ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಸಿ.ಎಫ್ ಪಾಟೀಲ, ಸಿ.ಜಿ. ಚನ್ನಪ್ಪಗೌಡರ, ಮಹಿಳಾ ಸದಸ್ಯರಾಗಿ ವಂದನಾ ಚೇ.ಅಂಗಡಿ, ಜ್ಯೋತಿ ವಿ.ಹಿರೇಮಠ, ವಿದ್ಯಾ ಪ್ರ.ಗಂಜಿಹಾಳ, ಸುಜಾತಾ ಶ.ಗುಡಿಮನಿ, ಜ್ಯೋತಿ ರಾ. ಉಮನಾಬಾದಿ, ಮಂಗಳಾ ಮ.ಬೇಲೇರಿ ಕ್ಲಬ್ ಸದಸ್ಯರಾಗಿ ಸೇರ್ಪಡೆಗೊಂಡರು.
ರೊ. ಇಂ. ಮೋಹನ ಹುಲಕೋಟಿ, ರೊ. ಶಶಿಧರ ದಿಂಡೂರ, ರೊ. ರಾಜಣ್ಣ ಮುಧೋಳ, ರೊ. ಪರಶುರಾಮ ನಾಯ್ಕರ್, ರೊ. ಸುರೇಶ ಅಬ್ಬಿಗೇರಿ, ರೊ. ಮಂಜುನಾಥ ಕಬಾಡಿ, ರೊ.ಡಿ.ಜಿ.ಕೊಳ್ಳಿ, ರೊ. ಕೆ.ವಿ. ಪಾಟೀಲ, ರೊ. ಸುರೇಶ ನಿಡಗುಂದಿ ಮೊದಲಾದವರು ಪಾಲ್ಗೊಂಡಿದ್ದರು.
ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ರೋಟರಿ ಗದಗ ಸೆಂಟ್ರಲ್ ಉತ್ತಮವಾದ ಕಾರ್ಯಗಳನ್ನು ಮಾಡುವ ಮೂಲಕ ಹೆಸರಾಗಿದೆ. ಸೇವೆಗೆ ಇನ್ನೊಂದು ಹೆಸರೇ ರೋಟರಿ ಸಂಸ್ಥೆ ಆಗಿದೆ ಎಂದು ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.



