ಕಾಂಗ್ರೆಸ್ ಸಾಧನಾ ಸಮಾವೇಶ ಒಂದು ಡ್ರಾಮಾ: ಸಚಿವ ವಿ. ಸೋಮಣ್ಣ!

0
Spread the love

ಚಾಮರಾಜನಗರ:- ಸಿಎಂ ಬದಲಾವಣೆಗೆ ಸಿದ್ದರಾಮಯ್ಯ ಮೈಂಡ್ ಸೆಟ್ ಆಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ ವ್ಯಂಗ್ಯವಾಡಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಾಳೆಯ ಕಾಂಗ್ರೆಸ್ ಸಾಧನಾ ಸಮಾವೇಶ ಒಂದು ಡ್ರಾಮಾ ಎಂದು ವ್ಯಂಗ್ಯವಾಡಿದರು. ಆಡಳಿತ ಕುಸಿದಾಗ ಸಮಾವೇಶದ ಡ್ರಾಮಾ ಮಾಡ್ತಿದ್ದಾರೆ. ಹಿಂದಿನ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ, ಪಾಪರ್ ಆಗಿದೆ. ಕೇಂದ್ರ ಸರ್ಕಾರ ನೀಡುವ ಅನುದಾನದಲ್ಲಿ ಕೆಲಸ ಮಾಡುತ್ತಿದೆ. ನಾವು ಕೊಡುವ ಯೋಜನೆ ಒಂದಾದರೆ, ಇವರು ಖರ್ಚು ಮಾಡುವುದೇ ಒಂದು. ಕಾಂಗ್ರೆಸ್‌‌ನಲ್ಲಿ ಹೈಕಮಾಂಡ್ ದೊಡ್ಡದು. ಏನು ಒಳ ಒಪ್ಪಂದ ಆಗಿದೆ ಅಂತಾ ಜ.26 ರೊಳಗೆ ಗೊತ್ತಾಗುತ್ತದೆ ಎಂದರು.

ನಮಗಿಂತ ಹೆಚ್ಚಾಗಿ ಸಿದ್ದರಾಮಯ್ಯನವರಿಗೆ ಒಪ್ಪಂದದ ಬಗ್ಗೆ ಗೊತ್ತಿದೆ. ಬದಲಾವಣೆಗೆ ಸಿದ್ದರಾಮಯ್ಯನವರ ಮೈಂಡ್ ಸೆಟ್ ಆಗಿದೆ ಎಂದರು.


Spread the love

LEAVE A REPLY

Please enter your comment!
Please enter your name here